AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಕಡಲತೀರದಲ್ಲಿ ಮೋದಿಯ ಮರಳಿನ ಕಲಾಕೃತಿ!

ಉಡುಪಿ ಕಡಲತೀರದಲ್ಲಿ ಮೋದಿಯ ಮರಳಿನ ಕಲಾಕೃತಿ!

ಭಾವನಾ ಹೆಗಡೆ
|

Updated on: Nov 27, 2025 | 1:22 PM

Share

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಉಡುಪಿಗೆ ಭೇಟಿ ನೀಡಿದ್ದು, ಉಡುಪಿ ಕಡಲತೀರದಲ್ಲಿ ಸ್ಯಾಂಡ್ ಟೀಮ್ ವತಿಯಿಂದ ವಿಶೇಷ ಮರಳು ಶಿಲ್ಪ ಕಲಾಕೃತಿಯನ್ನು ರಚಿಸಲಾಗಿತ್ತು. "ವೆಲ್ಕಮ್ ಟು ಉಡುಪಿ" ಎಂಬ ಥೀಮ್ ಅಡಿಯಲ್ಲಿ ರೂಪುಗೊಂಡಿರುವ ಈ ಕಲಾಕೃತಿಯು, ಶ್ರೀಕೃಷ್ಣನ ಅವತಾರ ಹಾಗೂ ಪ್ರಧಾನಿ ಮೋದಿ ಅವರ ಭಾವಶಿಲ್ಪವನ್ನು ಒಳಗೊಂಡಿದ್ದು, ಮಠದ ಹಿನ್ನೆಲೆ ಮತ್ತು ಗೀತಾ ಸಾರವನ್ನು ಆಧರಿಸಿದೆ. ಹರೀಶ್ ಸಾಗಾ, ಸಂತೋಷ್ ಭಟ್ ಆಲಡಿ, ಮತ್ತು ಉಜ್ವಲ್ ನಿಟ್ಟೆ ಅವರನ್ನೊಳಗೊಂಡ ತಂಡವು ಸತತ ಐದು ಗಂಟೆಗಳ ಕಾಲ ಶ್ರಮವಹಿಸಿ ಈ ಕಲಾಕೃತಿಯನ್ನು ಪೂರ್ಣಗೊಳಿಸಿದೆ.

ಬೆಂಗಳೂರು, ನವೆಂಬರ್ 27: ಪ್ರಧಾನಿ ನರೇಂದ್ರ ಮೋದಿ ಇಂದು ಉಡುಪಿಗೆ ಭೇಟಿ ನೀಡಿದ್ದು, ಉಡುಪಿ ಕಡಲತೀರದಲ್ಲಿ ಸ್ಯಾಂಡ್ ಟೀಮ್ ವತಿಯಿಂದ ವಿಶೇಷ ಮರಳು ಕಲಾಕೃತಿಯನ್ನು ರಚಿಸಲಾಗಿತ್ತು. “ವೆಲ್ಕಮ್ ಟು ಉಡುಪಿ” ಎಂಬ ಥೀಮ್ ಅಡಿಯಲ್ಲಿ ರೂಪುಗೊಂಡಿರುವ ಈ ಕಲಾಕೃತಿಯು, ಶ್ರೀಕೃಷ್ಣನ ಅವತಾರ ಹಾಗೂ ಪ್ರಧಾನಿ ಮೋದಿ ಅವರ ಶಿಲ್ಪವನ್ನು ಒಳಗೊಂಡಿದ್ದು, ಮಠದ ಹಿನ್ನೆಲೆ ಮತ್ತು ಗೀತಾ ಸಾರವನ್ನು ಆಧರಿಸಿದೆ. ಹರೀಶ್ ಸಾಗಾ, ಸಂತೋಷ್ ಭಟ್ ಆಲಡಿ, ಮತ್ತು ಉಜ್ವಲ್ ನಿಟ್ಟೆ ಅವರನ್ನೊಳಗೊಂಡ ತಂಡವು ಸತತ ಐದು ಗಂಟೆಗಳ ಕಾಲ ಶ್ರಮವಹಿಸಿ ಈ ಕಲಾಕೃತಿಯನ್ನು ಪೂರ್ಣಗೊಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Bhavana Hegde
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More