AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣ ಅವರ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದರು ಆದರೆ ಸೋನಿಯಾ ಗಾಂಧಿ ಏನನ್ನೂ ಹೇಳಲಿಲ್ಲ: ವಿಶ್ವನಾಥ್

ಕೃಷ್ಣ ಅವರ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದರು ಆದರೆ ಸೋನಿಯಾ ಗಾಂಧಿ ಏನನ್ನೂ ಹೇಳಲಿಲ್ಲ: ವಿಶ್ವನಾಥ್

ಅರುಣ್​ ಕುಮಾರ್​ ಬೆಳ್ಳಿ
|

Updated on:Dec 12, 2024 | 6:55 PM

ಕೃಷ್ಣ ಅವರ ಸಾವಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿ ಟ್ವೀಟ್ ಮಾಡಿದರು, ಆದರೆ ಕಾಂಗ್ರೆಸ್ ಅಧಿನಾಯಕಿಯಾಗಿರುವ ಸೋನಿಯ ಗಾಂಧಿಯವರು ಏನನ್ನೂ ಹೇಳದೆ ಮೌನವಾಗಿದ್ದಿದ್ದು ವಿಷಾದಕರ. ಕೃಷ್ಣ ಅವರು ತಮ್ಮ ರಾಜಕೀಯ ಬದುಕಿನ ಸಿಂಹಪಾಲನ್ನು ಕಾಂಗ್ರೆಸ್ ಪಕ್ಷಕ್ಕೆ ಮೀಸಲಿಟ್ಟಿದ್ದರು, ಮನುಷ್ಯ ಸತ್ತಾಗ ರಾಜಕಾರಣ ಮಾಡಬಾರದು, ಮಾನವೀಯತೆ ಪ್ರದರ್ಶಿಸಬೇಕು ಎಂದು ವಿಶ್ವನಾಥ್ ಹೇಳಿದರು.

ಮೈಸೂರು: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್ ನಿನ್ನೆ ನಿಧನರಾಧ ಹಿರಿಯ ಮುತ್ಸದ್ದಿ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕೃಷ್ಣ ಅವರ ಅವರ ಅಂತ್ಯಕ್ರಿಯೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಡಲಾಯಿತು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಅವರ ಮಂತ್ರಿಮಂಡಲದ ಹಲವಾರು ಸ್ಥಳದಲ್ಲಿ ಹಾಜರಿದ್ದು ಅತ್ಯಂತ ಜಬಾಬ್ದಾರಿಯುವಾಗಿ ಏರ್ಪಾಟುಗಳನ್ನು ಮಾಡಿದರು. ಕೃಷ್ಣ ಅವರನ್ನು ಗೌರವಯುತವಾಗಿ ಸರ್ಕಾರೀ ಮರ್ಯಾದೆಯೊಂದಿಗೆ ವಿದಾಯ ಹೇಳಿದ ಸಿದ್ದರಾಮಯ್ಯ ಸರ್ಕಾರಕ್ಕೆ ತಾನು ಕೃತಜ್ಞತೆ ಸಲ್ಲಿಸುವುದಾಗಿ ವಿಶ್ವನಾಥ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಿಜೆಪಿಯಿಂದ ವಿಮುಖರಾಗಿರುವ ಹೆಚ್ ವಿಶ್ವನಾಥ್ ಮನೆಗೆ ಭೇಟಿ ನೀಡಿದ ಯದುವೀರ್ ಕೃಷ್ಣದತ್ ಒಡೆಯರ್

Published on: Dec 12, 2024 03:05 PM