AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಅಧಿಕಾರದ ಮೊದಲ 10 ವರ್ಷ ಕೇವಲ ಟ್ರೇಲರ್, ಮುಂದಿನ 5 ವರ್ಷಗಳಲ್ಲಿ ಪೂರ್ತಿ ಪಿಕ್ಟರ್ ಅನಾವರಣ: ಬಸನಗೌಡ ಯತ್ನಾಳ್

ಪ್ರಧಾನಿ ಮೋದಿ ಅಧಿಕಾರದ ಮೊದಲ 10 ವರ್ಷ ಕೇವಲ ಟ್ರೇಲರ್, ಮುಂದಿನ 5 ವರ್ಷಗಳಲ್ಲಿ ಪೂರ್ತಿ ಪಿಕ್ಟರ್ ಅನಾವರಣ: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 03, 2024 | 2:46 PM

ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದನ್ನು ಉಲ್ಲೇಖಿಸಿದ ಅವರು, ಬಿಜೆಪಿ ಸರ್ಕಾರ ಭರವಸೆ ನೀಡಿದ್ದ ₹ 15 ಲಕ್ಷ ಎಲ್ಲಿ ಅಂತ ಕೇಳುತ್ತಾರೆ. ಅವರಿಗಿರುವ ಆಸ್ತಿಯನ್ನು ಮಾರಿದರೆ ಎಲ್ಲ ಭಾರತೀಯರಿಗೆ ₹ 15 ಲಕ್ಷ ಸಿಗುತ್ತವೆ ಎಂದು ಯತ್ನಾಳ್ ವ್ಯಂಗ್ಯವಾಡಿದರು. 50 ವರ್ಷಗಳ ಅವಧಿವರೆಗೆ ಅಧಿಕಾರ ನಡೆಸಿದ ಕಾಂಗ್ರೆಸ್ ಮಾಡಬಾರದ ಹಗರಣಗಳನ್ನೆಲ್ಲ ಮಾಡಿದೆ ಎಂದು ಅವರು ಕುಟುಕಿದರು.

ಉಡುಪಿ: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಇಂದು ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಅಣಕಿಸುತ್ತಾ ಕಾಂಗ್ರೆಸ್ ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು. ಹತ್ತು ಕೇಜಿ ಅಕ್ಕಿ ಕೊಡುತ್ತೇನೆಂದು ಹೇಳಿದ್ದ ಸಿದ್ದರಾಮಯ್ಯ ಕೇವಲ 5 ಕೆಜಿ ಮಾತ್ರ ಕೊಡುತ್ತಿದ್ದಾರೆ ಮತ್ತು ತಾನು ಅದನ್ನು ವಿಧಾನಸಬೆಯಲ್ಲಿ ನುಡಿದಂತೆ ಎಲ್ಲಿ ನಡೆದಿದ್ದೀರಿ ಅಂತ ಪ್ರಶ್ನಿಸಿದ್ದಾಗಿ ಯತ್ನಾಳ್ ಹೇಳಿದರು. ಶಿವಕುಮಾರ್ ತಿಹಾರ್ ಜೈಲಿಗೆ ಬಂದಿದ್ದನ್ನು ಉಲ್ಲೇಖಿಸಿದ ಅವರು, ಬಿಜೆಪಿ ಸರ್ಕಾರ ಭರವಸೆ ನೀಡಿದ್ದ ₹ 15 ಲಕ್ಷ ಎಲ್ಲಿ ಅಂತ ಕೇಳುತ್ತಾರೆ. ಅವರಿಗಿರುವ ಆಸ್ತಿಯನ್ನು ಮಾರಿದರೆ ಎಲ್ಲ ಭಾರತೀಯರಿಗೆ ₹ 15 ಲಕ್ಷ ಸಿಗುತ್ತವೆ ಎಂದು ಯತ್ನಾಳ್ ವ್ಯಂಗ್ಯವಾಡಿದರು. 50 ವರ್ಷಗಳ ಅವಧಿವರೆಗೆ ಅಧಿಕಾರ ನಡೆಸಿದ ಕಾಂಗ್ರೆಸ್ ಮಾಡಬಾರದ ಹಗರಣಗಳನ್ನೆಲ್ಲ ಮಾಡಿದೆ, ಪ್ರಧಾನಿ ನರೇಂದ್ರ ಮೋದಿಯವರ ಈವರೆಗಿನ 10 ವರ್ಷಗಳ ಆಡಳಿತ ಕೇವಲ ಟ್ರೇಲರ್ ಅಗಿದ್ದು ಮುಂದಿನ 5 ವರ್ಷಗಳ ಅವಧಿಯಲ್ಲಿ ಪೂರ್ತಿ ಸಿನಿಮಾ ಅನಾವರಣಗೊಳ್ಳಲಿದೆ ಎಂದು ಹೇಳಿದ ಅವರು ಕೇಜ್ರಿವಾಲ್, ಡಿಂಗ್ರಿವಾಲ್ ಗಳೆಲ್ಲ ಜೈಲು ಸೇರಲಿದ್ದಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರದಲ್ಲಿ ಶೆ.50ರಷ್ಟು ಕಮಿಷನ್​: ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ