Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಂತಪುರ ಮಾರ್ಗವಾಗಿ ಹೊರಟ ದರ್ಶನ್ ಹೊತ್ತ ಪೊಲೀಸ್ ವ್ಯಾನ್ 10 ಗಂಟೆಗೆ ಬಳ್ಳಾರಿ ತಲುಪಲಿದೆ

ಅನಂತಪುರ ಮಾರ್ಗವಾಗಿ ಹೊರಟ ದರ್ಶನ್ ಹೊತ್ತ ಪೊಲೀಸ್ ವ್ಯಾನ್ 10 ಗಂಟೆಗೆ ಬಳ್ಳಾರಿ ತಲುಪಲಿದೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 29, 2024 | 10:15 AM

ತುಮಕೂರು ಮತ್ತು ಚಿತ್ರದುರ್ಗದ ಸಾವಿರಾರು ದರ್ಶನ್ ಅಭಿಮಾನಿಗಳು ಪೊಲೀಸ್ ವ್ಯಾನ್ ರಸ್ತೆಯ ಮೂಲಕ ಹಾದು ಹೋಗುವುದನ್ನು ನೋಡಲು ಕಾಯುತ್ತಾ ನಿಂತಿದ್ದರಿಂದ ಪೊಲೀಸರು ಅನಂತಪುರ ಮಾರ್ಗದಿಂದ ತೆರಳಲು ನಿರ್ಧರಿಸಿದರು ಅಂತ ನಮ್ಮ ವರದಿಗಾರ ಹೇಳುತ್ತಾರೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಅರೋಪಿಯಾಗಿರುವ ಚಿತ್ರನಟ ದರ್ಶನ್ ರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ವರ್ಗಾಯಿಸುವ ಕೆಲಸ ಜಾರಿಯಲ್ಲಿದ್ದ್ದು ನಮ್ಮ ವರದಿಗಾರ ಹೆಚ್ಚಿನ ಮಾಹಿತಿಯನ್ನು ನೀಡುತ್ತಿದ್ದಾರೆ. ಮೊದಲು ಪ್ಲ್ಯಾನ್ ಮಾಡಿದಂತೆ ಚಿತ್ರದುರ್ಗ ಮತ್ತು ತುಮಕೂರು ಮಾರ್ಗವಾಗಿ ಅವರನ್ನು ಬಳ್ಳಾರಿಗೆ ಕರೆದೊಯ್ಯುವ ಬದಲು ಆಂಧ್ರಪ್ರದೇಶದ ಅನಂತರಪುರ ಮಾರ್ಗದಿಂದ ಕರೆದೊಯ್ಯಲಾಗುತ್ತಿದೆ. ಹತ್ತು ಗಂಟೆಯ ನಂತರ ಪೊಲೀಸ್ ವ್ಯಾನ್ ಬಳ್ಳಾರಿ ತಲುಪಲಿದೆಯಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ದರ್ಶನ್ ತೂಗುದೀಪ: ಪರಪ್ಪನ ಅಗ್ರಹಾರದಿಂದ ಮುಂಜಾನೆಯೇ ಬಳ್ಳಾರಿಗೆ ಶಿಫ್ಟ್; ಜೈಲು ತಲುಪೋದು ಎಷ್ಟು ಗಂಟೆಗೆ?