ಗದಗನಲ್ಲಿ ನಡೆದ ಬಹಿರಂಗ ಸಭೆಯೊಂದರಲ್ಲಿ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಮಾತುಗಳನ್ನಾಡಿದರು

ಇನ್ನು ಮುಂದೆ ಮುಸಲ್ಮಾನರು ಇಂಥ ಕೃತ್ಯಗಳನ್ನು ನಿಲ್ಲಿಸದೆ ಹೋದರೆ, ಅವರು ನಮ್ಮ ಒಬ್ಬ ಯುವತಿಯನ್ನು ಬಲೆಗೆ ಕೆಡವಿದರೆ, ಮುಸ್ಲಿಂ ಸಮುದಾಯದ ಹತ್ತು ಹುಡುಗಿಯರನ್ನು ನಾವು ಹಾರಿಸಿಕೊಂಡು ಹೋಗುತ್ತೇವೆ ಅಂತ ಮುತಾಲಿಕ್ ವಿವಾದಾತ್ಮಕ ಮಾತುಗಳನ್ನಾಡಿದರು.

ಗದಗನಲ್ಲಿ ನಡೆದ ಬಹಿರಂಗ ಸಭೆಯೊಂದರಲ್ಲಿ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಮಾತುಗಳನ್ನಾಡಿದರು
| Edited By: Arun Kumar Belly

Updated on: Apr 14, 2022 | 11:29 PM

ಗದಗ: ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಅವರು ಪ್ರಚೋದನಕಾರಿ (provocative) ಭಾಷಣ ಮಾಡುವುದನ್ನು ಮುಂದುವರಿಸಿದ್ದಾರೆ ಮಾರಾಯ್ರೇ. ಗದಗನಲ್ಲಿ (Gadag) ಗುರುವಾರ ಬಹಿರಂಗ ಸಭೆಯೊಂದರಲ್ಲಿ ಮಾತಾಡಿದ ಮುತಾಲಿಕ್ ಅವರು ಲವ್ ಜಿಹಾದ್ (Love Jihad) ಅಂದರೇನು ಅನ್ನೋದಿಕ್ಕೆ ವಿವರಣೆ ನೀಡಿದರು. ಕಾಲೇಜುಗಳಿಗೆ ಹೋಗುವ ಹಿಂದೂ ಹಿಂದೂ ಯುವತಿಯರನ್ನು ಪ್ರೇಮಪಾಶದಲ್ಲಿ ಸಿಲುಕಿಸಿ ಅವರನ್ನು ಮದುವೆಯಾಗಿ ಮತಾಂತರ ಮಾಡಿ ಬುರ್ಖಾ ತೊಡುವಂತ ಮಾಡುವುದೇ ಲವ್ ಜಿಹಾದ್ ಎಂದು ಅವರು ಹೇಳಿದರು. ಜಿಹಾದ್ ಅಂದಾಕ್ಷಣ ಬಾಂಬು, ಚಾಕು, ಚೂರಿ, ಮೊದಲಾದವಲ್ಲ. ಪ್ರತಿ ಮಹಿಳೆಯನ್ನು ತಾಯಿ ಸ್ವರೂಪದಲ್ಲಿ ಕಾಣುವುದೇ ನಮ್ಮ ದೇಶದ ಸಂಸ್ಕೃತಿ ಆಗಿರುವಾಗ ವ್ಯವಸ್ಥಿತವಾಗಿ ನಮ್ಮ ಮಹಿಳೆಯರನ್ನು ಜಾಲದಲ್ಲಿ ಸಿಲುಕಿಸಿ ಅವರನ್ನು ಮತಾಂತರ ಮಾಡುವ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು.

ಈ ಕೆಲಸ ಪ್ರತಿನಿತ್ಯ ನಡೆಯುತ್ತಿದೆ, ತಮಗೆ ಈ ಕುರಿತು ದಿನವೊಂದಕ್ಕೆ ಹತ್ತಾರು ಫೋನ್ ಕರೆಗಳು ಬರುತ್ತವೆ, ಬೇರೆ ಬೇರೆ ಜಿಲ್ಲೆಗಳ ನಮ್ಮ ಅಧ್ಯಕ್ಷರಿಗೂ ಕರೆಗಳು ಹೋಗುತ್ತಿವೆ. ಫೋನ್ ಮಾಡಿದವದೆಲ್ಲ, ಹಿಂದೂ ಮಹಿಳೆಯರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಹತಾಷೆ ಮತ್ತು ನೋವು ತೋಡಿಕೊಳ್ಳುತ್ತಾರೆ ಎಂದು ಹೇಳಿದ ಮುತಾಲಿಕ್ ಇದಕ್ಕೆ ಕೊನೆ ಹೇಳಲೇಬೇಕು ಎಂದರು.

ಇನ್ನು ಮುಂದೆ ಮುಸಲ್ಮಾನರು ಇಂಥ ಕೃತ್ಯಗಳನ್ನು ನಿಲ್ಲಿಸದೆ ಹೋದರೆ, ಅವರು ನಮ್ಮ ಒಬ್ಬ ಯುವತಿಯನ್ನು ಬಲೆಗೆ ಕೆಡವಿದರೆ, ಮುಸ್ಲಿಂ ಸಮುದಾಯದ ಹತ್ತು ಹುಡುಗಿಯರನ್ನು ನಾವು ಹಾರಿಸಿಕೊಂಡು ಹೋಗುತ್ತೇವೆ ಅಂತ ಮುತಾಲಿಕ್ ವಿವಾದಾತ್ಮಕ ಮಾತುಗಳನ್ನಾಡಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೋಮು ಗಲಭೆಗೆ ಪ್ರಚೋದನೆ ನೀಡುವ ಮಾತುಗಳನ್ನಾಡಬೇಡಿ, ಇನ್ನು ಸಾಕು, ಎಲ್ಲ ಧರ್ಮದವರು ಒಟ್ಟಾಗಿ ಅನ್ಯೋನ್ಯತೆಯಿಂದ ಬಾಳೋಣ ಅಂತ ಕಳಕಳಿ ವಿನಂತಿ ಮಾಡಿಕೊಂಡರೂ ಮುತಾಲಿಕ್ ಅವರಂಥ ಜನ ಪ್ರಚೋದನಕಾರಿ ಬಾಷಣ ಮಾಡುವುದನ್ನು ನಿಲ್ಲಿಸುತ್ತಿಲ್ಲ ಅನ್ನೋದೇ ಕನ್ನಡಿಗರ ಯೋಚನೆಯಾಗಿದೆ.

ಇದನ್ನೂ ಓದಿ:   ಪ್ರಗತಿಪರ ವಿಚಾರವಾದಿಗಳನ್ನು ಆವಾಚ್ಯ ಪದಗಳಿಂದ ಬೈದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್

Follow us
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್
ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಎಂ ಪಾದಮುಟ್ಟಿ ನಮಸ್ಕರಿಸಿದ ವಿನೋದ್ ರಾಜ್
ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಎಂ ಪಾದಮುಟ್ಟಿ ನಮಸ್ಕರಿಸಿದ ವಿನೋದ್ ರಾಜ್
ಲೀಲಮ್ಮ ಮೂಲತಃ ಕ್ರಿಶ್ಚಿಯನ್, ಅವರ ಹೆಸರು ಲೀನಾ ಸಿಕ್ವೇರಾ ಆಗಿತ್ತು!
ಲೀಲಮ್ಮ ಮೂಲತಃ ಕ್ರಿಶ್ಚಿಯನ್, ಅವರ ಹೆಸರು ಲೀನಾ ಸಿಕ್ವೇರಾ ಆಗಿತ್ತು!
ಮಮತಾಮಯಿ ಲೀಲಮ್ಮ ತೋಟದಲ್ಲಿದ್ದ ಚೇಳಿಗೂ ಆಹಾರ ನೀಡಿ ಮಾತಾಡಿಸುತ್ತಿದ್ದರು!
ಮಮತಾಮಯಿ ಲೀಲಮ್ಮ ತೋಟದಲ್ಲಿದ್ದ ಚೇಳಿಗೂ ಆಹಾರ ನೀಡಿ ಮಾತಾಡಿಸುತ್ತಿದ್ದರು!
Leelavathi No More: ತನ್ನೊಡತಿಯ ಭಾವಚಿತ್ರದ ಎದುರು ಬ್ಲ್ಯಾಕಿ ಮೂಕರೋದನೆ!
Leelavathi No More: ತನ್ನೊಡತಿಯ ಭಾವಚಿತ್ರದ ಎದುರು ಬ್ಲ್ಯಾಕಿ ಮೂಕರೋದನೆ!