ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: ತನಿಖೆಗೆ ಆಗ್ರಹಿಸಿದ HD ರೇವಣ್ಣ

Edited By:

Updated on: Oct 03, 2024 | 5:35 PM

ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್ ನಾಯಕ ಮಾಜಿ ಸಚಿವ ಹೆಚ್​ಡಿ ರೇವಣ್ಣ, ಹಾಸನದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪಾರ್ಕ್ ಗಾಗಿ ನಿವೇಶನ ಮೀಸಲಿಡಲಾಗಿತ್ತು. ಎರಡು ಎಕರೆ ಪಾರ್ಕ್ ಜಾಗ ಕನಿಷ್ಠ 25 ಕೋಟಿ ರೂ. ಬೆಲೆ ಬಾಳುತ್ತೆ. ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.

ಹಾಸನ, ಅಕ್ಟೋಬರ್​ 03: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಾಜಿ ಸಚಿವ ಹೆಚ್​ಡಿ ರೇವಣ್ಣ (HD Revanna) ಆಗ್ರಹಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಶೆಡ್​​​ ನಿರ್ಮಾಣದ ಹಿಂದೆ ಯಾರಿದ್ದಾರೆ ಎಂದು ಎಸ್​​ಪಿ ಹೇಳಬೇಕು. ಹಾಸನ ಸಂಸದರು ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಎಂದು ಸಂಸದ ಶ್ರೇಯಸ್ ಪಟೇಲ್ ವಿರುದ್ಧ ಹೆಚ್​.ಡಿ.ರೇವಣ್ಣ ವಾಗ್ದಾಳಿ ಮಾಡಿದ್ದಾರೆ. ಹಾಸನ ತಾಲೂಕಿನ ನಾಗತವಳ್ಳಿಯಲ್ಲಿರುವ ಎರಡು ಎಕರೆ ಭೂಮಿ ಪಾರ್ಕ್​ ಆಗಿಯೇ ಉಳಿಸಬೇಕು. ಕೈಗಾರಿಕೆ ಪ್ರದೇಶದಲ್ಲಿ ಪಾರ್ಕ್​ಗಾಗಿ ನಿವೇಶನ ಮೀಸಲಿಡಲಾಗಿತ್ತು. ಎರಡು ಎಕರೆ ಪಾರ್ಕ್ ಕನಿಷ್ಠ 25 ಕೋಟಿ ರೂ. ಬೆಲೆ ಬಾಳುತ್ತೆ. 2013ರಲ್ಲಿ ಕೆಲ ಅಧಿಕಾರಿಗಳು ಭೂಮಿಯನ್ನು ಮಂಜೂರು ಮಾಡಿದ್ದಾರೆ. ಈ ಜಾಗದಲ್ಲಿ ಕಾಮಗಾರಿ ನಡೆಸದಂತೆ ಕೆಐಎಡಿಬಿ ಆದೇಶ ಮಾಡಿದೆ. ಆ ಜಾಗದಲ್ಲಿ ದೇವಸ್ಥಾನ ಇತ್ತು, ಗಿಡಗಳನ್ನು ಬೆಳೆಸಲಾಗಿತ್ತು. 500 ಪೊಲೀಸರನ್ನು ಬಳಸಿ ಕಾಮಗಾರಿ ಮಾಡಿಸಲು ಪ್ರಯತ್ನ ನಡೆದಿದೆ. ಅಕ್ರಮ ಮಂಜೂರಾತಿ ಮಾಡಿದವರ ವಿರುದ್ಧ ಕ್ರಮಕ್ಕೆ ರೇವಣ್ಣ ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us