AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಮೊಹಮ್ಮದ್ ಅಜರುದ್ದೀನ್ ಬರೋದು ತಡವಾಯ್ತು, ಕೈಯಲ್ಲಿ ಬ್ಯಾಟು-ಬಾಲು ಹಿಡಿದ ಪೊಲೀಸರು

ರಾಯಚೂರು: ಮೊಹಮ್ಮದ್ ಅಜರುದ್ದೀನ್ ಬರೋದು ತಡವಾಯ್ತು, ಕೈಯಲ್ಲಿ ಬ್ಯಾಟು-ಬಾಲು ಹಿಡಿದ ಪೊಲೀಸರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 14, 2025 | 8:19 PM

Share

ಇಲ್ಲಿ ಬ್ಯಾಟ್ ಮಾಡುತ್ತಿರುವವರು ಪೊಲೀಸ್ ಇನ್ಸ್​ಪೆಕ್ಟರ್ ಉಮೇಶ್ ಕಾಂಬ್ಳೆ ಅಂತೆ. ಕಾಲೇಜು ದಿನಗಳಲ್ಲಿ ಅವರಿಗೆ ಕ್ರಿಕೆಟ್ ಆಡಿದ ಅನುಭವ ಇರುವಂತಿದೆ. ಅವರು ಬ್ಯಾಟ್ ಬೀಸುವ ಶೈಲಿಯನ್ನು ಗಮನಿಸಿದರೆ ಅದು ಗೊತ್ತಾಗುತ್ತದೆ. ಕ್ರಿಕೆಟ್ ಟೂರ್ನಿಗಳನ್ನು ಉದ್ಘಾಟಿಸುವ ನಮ್ಮ ರಾಜಕಾರಣಿಗಳು ಬ್ಯಾಟ್ ಬೀಸುವುದನ್ನು ನೋಡಿದ್ದೀರಲ್ಲ? ಸೌದೆ ಸೀಳುವವನು ಕೈಯಲ್ಲಿ ಕೊಡಲಿ ಹಿಡಿದಂತೆ ಇವರು ಬ್ಯಾಟ್ ಹಿಡಿದಿರುತ್ತಾರೆ! ಬಾಲ್ ಕಂಡಾಗ ಕಣ್ಣುಮುಚ್ಚಿ ಬ್ಯಾಟ್ ಬೀಸುತ್ತಾರೆ!!

ರಾಯಚೂರು, ಜೂನ್ 14: ಇದೇನು, ಕ್ರಿಕೆಟ್ ಆಟಗಾರರ ಯೂನಿಫಾರ್ಮ್ ಬದಲಾಯಿತೇ ಅಂತ ಅಂದ್ಕೋಬೇಡಿ ಮಾರಾಯ್ರೇ, ಇಲ್ಲಿ ಕ್ರಿಕೆಟ್ ಆಡ್ತಿರೋರು ಪೊಲೀಸರೇ ಹೊರತು ಆಟಗಾರರಲ್ಲ. ಅಸಲಿಗೆ ಇವರು ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ಬಂದೋಬಸ್ತ್​ಗಾಗಿ ನಿಯೋಜನೆಗೊಂಡಿರುವ ಪೊಲೀಸರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಕ್ರಿಕೆಟ್ ಟೂರ್ನಮೆಂಟ್​ವೊಂದರ ಪ್ರಶಸ್ತಿ ವಿತರಣೆಯನ್ನು ಮಾಜಿ ಅಕರ್ಷಕ ಬ್ಯಾಟರ್ ಮಾಡಬೇಕಿತ್ತು. ಅದರೆ ಅವರು ಬರೋದು ತಡವಾಗಿದ್ದರಿಂದ ಮತ್ತೇನು ಮಾಡೋದು ಅಂತ ಪೊಲೀಸರು ಟೈಂ ಪಾಸ್​ಗಾಗಿ ಕ್ರಿಕೆಟ್ ಆಡಿದರು.

ಇದನ್ನೂ ಓದಿ:  Virat Kohli: ಕೊಹ್ಲಿ ಬಗ್ಗೆ ಬಹುದೊಡ್ಡ ಹೇಳಿಕೆ ನೀಡಿದ ಮೊಹಮ್ಮದ್ ಅಜರುದ್ದೀನ್: ಏನಂದ್ರು ನೋಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More