Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಜೇಂದ್ರ ಪೊನ್ನಪ್ಪ ಎಂಥಾ ಬುದ್ಧಿವಂತ ರೀ..’: ‘ದೃಶ್ಯ 2’ ಸಿನಿಮಾ ಬಗ್ಗೆ ರವಿಚಂದ್ರನ್​ ಮಾತು

‘ರಾಜೇಂದ್ರ ಪೊನ್ನಪ್ಪ ಎಂಥಾ ಬುದ್ಧಿವಂತ ರೀ..’: ‘ದೃಶ್ಯ 2’ ಸಿನಿಮಾ ಬಗ್ಗೆ ರವಿಚಂದ್ರನ್​ ಮಾತು

TV9 Web
| Updated By: ಮದನ್​ ಕುಮಾರ್​

Updated on:Dec 10, 2021 | 10:04 AM

Drishya 2: ಸೆಲೆಬ್ರಿಟಿಗಳಿಗಾಗಿ ‘ದೃಶ್ಯ 2’ ಸಿನಿಮಾದ ಪ್ರೀಮಿಯರ್​ ಪ್ರದರ್ಶನ ಏರ್ಪಡಿಸಲಾಗಿತ್ತು. ಉಪೇಂದ್ರ, ಮೇಘನಾ ರಾಜ್​, ಧ್ರುವ ಸರ್ಜಾ, ಪ್ರೇರಣಾ ಮುಂತಾದವರ ಜತೆ ಕುಳಿತು ರವಿಚಂದ್ರನ್​ ಕೂಡ ಸಿನಿಮಾ ವೀಕ್ಷಿಸಿದರು.

ರವಿಚಂದ್ರನ್​ (Ravichandran) ನಟನೆಯ ಬಹುನಿರೀಕ್ಷಿತ ‘ದೃಶ್ಯ 2’ (Drishya 2) ಚಿತ್ರ ಬಿಡುಗಡೆ ಆಗಿದೆ. ಗುರುವಾರ (ಡಿ.9) ರಾತ್ರಿಯೇ ಈ ಸಿನಿಮಾದ ಪ್ರೀಮಿಯರ್​ ಪ್ರದರ್ಶನ ಏರ್ಪಡಿಸಲಾಗಿತ್ತು. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದು ‘ದೃಶ್ಯ 2’ ವೀಕ್ಷಿಸಿದ್ದಾರೆ. ಉಪೇಂದ್ರ, ಮೇಘನಾ ರಾಜ್​, ಧ್ರುವ ಸರ್ಜಾ, ಪ್ರೇರಣಾ ಸೇರಿದಂತೆ ಅನೇಕರು ಸಿನಿಮಾ ನೋಡಿದ್ದಾರೆ. ರವಿಚಂದ್ರನ್​ ಕೂಡ ಎಲ್ಲರ ಜೊತೆ ಕುಳಿತು ‘ದೃಶ್ಯ 2’ ಕಣ್ತುಂಬಿಕೊಂಡರು. ಬಳಿಕ ಮಾತನಾಡಿದ ಅವರು ರಾಜೇಂದ್ರ ಪೊನ್ನಪ್ಪ ಪಾತ್ರದ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ‘ರಾಜೇಂದ್ರ ಪೊನ್ನಪ್ಪ ಎಂಥಾ ಬುದ್ಧಿವಂತ ರೀ..’ ಎಂದು ಅಚ್ಚರಿ ವ್ಯಕ್ತಪಡಿಸಿದರು. ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ಚಿತ್ರ ಇದಾಗಿದೆ ಎಂದು ಅವರು ಹೇಳಿದರು. ಈ ಚಿತ್ರಕ್ಕೆ ಪಿ. ವಾಸು ನಿರ್ದೇಶನ ಮಾಡಿದ್ದಾರೆ. ರವಿಚಂದ್ರನ್​ ಜತೆ ನವ್ಯಾ ನಾಯರ್​, ಆರೋಹಿ ನಾರಾಯಣ್​​, ಅನಂತ್​ ನಾಗ್​, ಪ್ರಮೋದ್​ ಶೆಟ್ಟಿ, ಲಾಸ್ಯಾ ನಾಗರಾಜ್​ ಮುಂತಾದವರು ‘ದೃಶ್ಯ 2’ ಚಿತ್ರದಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇದನ್ನೂ ಓದಿ:

ರವಿಚಂದ್ರನ್​ ಪುತ್ರ ಕನ್ನಡ ಸರಿಯಾಗಿ ಕಲಿತಿದ್ದು ಹೇಗೆ? ಮನುರಂಜನ್​ ನೀಡಿದ ವಿವರಣೆ ಇಲ್ಲಿದೆ..

ಇಷ್ಟು ವರ್ಷಗಳ ಬಳಿಕ ಹೆಸರು ಬದಲಿಸಿಕೊಳ್ಳಲು ರವಿಚಂದ್ರನ್​ ನಿರ್ಧಾರ; ಹೊಸ ಹೆಸರು ಏನು?

Published on: Dec 10, 2021 09:59 AM