‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’: ನಿರ್ದೇಶಕಿ ಚಂದ್ರಕಲಾ

| Updated By: ಮದನ್​ ಕುಮಾರ್​

Updated on: Jul 02, 2024 | 8:26 PM

ನಟ ದರ್ಶನ್​ ಮೇಲೆ ಕೊಲೆ ಆರೋಪ ಇದೆ. ರೇಣುಕಾ ಸ್ವಾಮಿ ಹತ್ಯೆ ಕೇಸ್​ನಲ್ಲಿ ಅವರು ಎ2 ಆಗಿದ್ದಾರೆ. ಈ ಪ್ರಕರಣ ಬಹಿರಂಗ ಆದಾಗಿನಿಂದ ದರ್ಶನ್​ ಮತ್ತು ಪವಿತ್ರಾ ಗೌಡ ಬಗ್ಗೆಯೇ ಹೆಚ್ಚು ಚರ್ಚೆ ಆಗುತ್ತಿದೆ. ಆದರೆ ರೇಣುಕಾ ಸ್ವಾಮಿ ಮಾಡಿದ ತಪ್ಪಿನ ಬಗ್ಗೆ ಅನೇಕರು ಮಾತನಾಡುತ್ತಿಲ್ಲ. ಆತ ಮಾಡಿದ್ದು ದೊಡ್ಡ ತಪ್ಪು ಎಂದು ನಿರ್ದೇಶಕಿ ಚಂದ್ರಕಲಾ ಅವರು ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ..

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಕೇಸ್​ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಪ್ರಕರಣದಲ್ಲಿ ನಟ ದರ್ಶನ್​ (Darshan) ಜೈಲು ಸೇರಿದ್ದಾರೆ. ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ (Renuka Swamy) ಅಶ್ಲೀಲ ಸಂದೇಶ ಕಳಿಸಿದ್ದ ಎನ್ನಲಾಗಿದೆ. ಆ ಬಗ್ಗೆ ಬುದ್ಧಿ ಹೇಳಲು ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರಲಾಗಿತ್ತು. ಪರಿಸ್ಥಿತಿ ಕೈ ಮೀರಿ ಆತನ ಹತ್ಯೆ ನಡೆದಿದೆ ಎಂಬ ಮಾಹಿತಿ ಇದೆ. ಈ ಕುರಿತು ‘ಆಶಿಕಿ 3’ ಸಿನಿಮಾ ನಿರ್ದೇಶಕಿ ಚಂದ್ರಕಲಾ ಅವರು ಪ್ರತಿಕ್ರಿಯಿಸಿದ್ದಾರೆ. ‘ರೇಣುಕಾ ಸ್ವಾಮಿ ಮಾಡಿದ್ದು ತುಂಬ ದೊಡ್ಡ ತಪ್ಪು. ಆದರೆ ಅದನ್ನು ಯಾರೂ ಗಮನಿಸುತ್ತಿಲ್ಲ. ಆ ರೀತಿಯ ಜನರು ಸಾಕಷ್ಟು ಮಂದಿ ಇದ್ದಾರೆ. ಫೇಕ್​ ಅಕೌಂಟ್​ಗಳ ಮೂಲಕ ಕೆಟ್ಟ ಕಮೆಂಟ್​ ಹಾಕುತ್ತಾರೆ. ಅಂಥವರಿಗೆಲ್ಲ ಬುದ್ಧಿ ಬರಬೇಕು. ದರ್ಶನ್​ ವಿಚಾರವೇ ಹೈಲೈಟ್​ ಆಗುತ್ತಿರುವುದರಿಂದ ರೇಣುಕಾ ಸ್ವಾಮಿ ವಿಚಾರ ಹೈಲೈಟ್​ ಆಗಿಲ್ಲ. ಒಟ್ಟಾರೆ ಪ್ರಕರಣವನ್ನು ಕಾನೂನು ನೋಡಿಕೊಳ್ಳುತ್ತದೆ’ ಎಂದು ಚಂದ್ರಕಲಾ (Director Chandrakala) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on