ಸ್ಥಾಪನೆಯ 120 ನೇ ವಾರ್ಷಿಕೋತ್ಸವ ಅಂಗವಾಗಿ ರಾಯಲ್ ಎನ್​ಫೀಲ್ಡ್​ ಎರಡು ಸೀಮಿತ ಆವೃತ್ತಿ ಬೈಕ್​ಗಳನ್ನು ಬಿಡುಗಡೆ ಮಾಡುತ್ತಿದೆ!

ಅಂದಹಾಗೆ, ರಾಯಲ್ ಎನ್​ಫೀಲ್ಡ್​​​ ಕಂಪನಿಯು ಎರಡೂ ಮಾಡೆಲ್ ಗಳು ಸೇರಿ ಕೇವಲ 480 ಬೈಕ್​ಗಳನ್ನು ಮಾತ್ರ ಉತ್ಪಾದಿಸಲಿದ್ದು ಅದರಲ್ಲಿ 120 ಬೈಕ್​ಗಳನ್ನು  ಮಾತ್ರ ಭಾರತೀಯ ಮಾರ್ಕೆಟ್ ಗಾಗಿ ಮೀಸಲಿರಿಸಲಾಗಿದೆ.

| Edited By: Arun Kumar Belly

Updated on: Nov 30, 2021 | 7:29 PM

ರಾಯಲ್ ಎನ್ಫೀಲ್ಡ್ ಕಂಪನಿ ಅಸ್ತಿತ್ವಕ್ಕೆ ಬಂದು 120 ವರ್ಷ ಕಳೆಯಿತು ಮಾರಾಯ್ರೇ. ಕಂಪನಿಯು 120 ನೇ ವಾರ್ಷಿಕೋತ್ಸವ ಸ್ಮರಣೀಯ ಮಾಡುವುದಕ್ಕೋಸ್ಕರ ಇಂಟೆರ್ ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್ಗಳನ್ನು ಈಗ ಜಾರಿಯಲ್ಲಿರುವ ಇ ಐ ಸಿ ಎಮ್ ಎ 2021 ಮೋಟಾರ್ ಶೋನಲ್ಲಿ ಪ್ರದರ್ಶಿಸುತ್ತಿದೆ. ಹೊಸ 120ನೇ ವಾರ್ಷಿಕೋತ್ಸವದ ಬೈಕ್​ಗಳು ಭಾರತದಲ್ಲಿ ಕೇವಲ ಅನ್ಲೈನ್ ಮೂಲಕ ಮಾತ್ರ ಲಭ್ಯವಾಗಲಿದ್ದು, ಮಾರಾಟವು ಡಿಸೆಂಬರ್ 6, 2021 ರಿಂದ ಆರಂಭವಾಗಲಿದೆ. ನೀವು ಈ ಕಂಪನಿಯ ಬೈಕ್ಗಳ ಅಭಿಮಾನಿಯಾಗಿದಲ್ಲಿ ನಿಮಗೆ ತಿಳಿಸಬೇಕಿರುವ ಅತಿ ಮುಖ್ಯ ಸಂಗತಿಯೇನೆಂದರೆ, ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ನೀವು ಈಗ ಬುಕ್ ಮಾಡಿದರೂ, ಇಂಟೆರ್ ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್ಗಳು 2022 ರ ಮೊದಲ ತ್ರೈಮಾಸಿಕದಲ್ಲಷ್ಟೇ ಭಾರತದ ಮಾರ್ಕೆಟ್ ಪ್ರವೇಶಿಸಲಿವೆ.

ಅಂದಹಾಗೆ, ರಾಯಲ್ ಎನ್​ಫೀಲ್ಡ್​​​ ಕಂಪನಿಯು ಎರಡೂ ಮಾಡೆಲ್ ಗಳು ಸೇರಿ ಕೇವಲ 480 ಬೈಕ್​ಗಳನ್ನು ಮಾತ್ರ ಉತ್ಪಾದಿಸಲಿದ್ದು ಅದರಲ್ಲಿ 120 ಬೈಕ್​ಗಳನ್ನು  ಮಾತ್ರ ಭಾರತೀಯ ಮಾರ್ಕೆಟ್ ಗಾಗಿ ಮೀಸಲಿರಿಸಲಾಗಿದೆ.

ಮಿಕ್ಕಿದ ಗಾಡಿಗಳನ್ನು ಯೂರೋಪ್, ಯುಎಸ್, ದಕ್ಷಿಣ ಮತ್ತು ಪೂರ್ವ ಆಫ್ರಿಕಾ ಮೊದಲಾದ ಪ್ರಾಂತ್ಯಗಳಿಗೆ 60 ಕಾಂಟಿನೆಂಟಲ್ ಜಿಟಿ ಮತ್ತು 60 ಇಂಟರ್ ಸೆಪ್ಟರ್ ಐ ಎನ್ ಟಿ 650 60 ಬೈಕ್ಗಳು ಸೇರಿದಂತೆ ಪ್ರತಿ ಪ್ರಾಂತ್ಯಕ್ಕೆ 120 ವೆಹಿಕಲ್​ಗಳನ್ನು ಮಾತ್ರ ಕಳಿಸಲಾಗುವುದೆಂದು ಕಂಪನಿ ಮೂಲಗಳು ತಿಳಿಸಿವೆ.

ಈ ಬೈಕ್ ಗಳು ಭಾರತದ ಮಾರ್ಕೆಟ್ನಲ್ಲಿ ಸಹಜವಾಗೇ ಬಹಳ ದುಬಾರಿ ಎನಿಸಲಿವೆ. ಇಂಟರ್ ಸೆಪ್ಟರ್ ಐ ಎನ್ ಟಿ 650 ಬೈಕ್ ಸೀಮಿತ ಆವೃತ್ತಿಯ ಬೆಲೆ ನಿಮ್ಮ ಕೈ ಸೇರುವ ಹೊತ್ತಿಗೆ ರೂ 3.25 ಲಕ್ಷ ಮತ್ತು ಕಾಂಟಿನೆಂಟಲ್ ಜಿಟಿ ಬೈಕಿನ ಬೆಲೆ ರೂ. 3.40 (ಎರಡೂ ಎಕ್ಸ್ ಶೋರೂಮ್ ಬೆಲೆಗಳು) ಲಕ್ಷವಾಗಬಹುದು.

ಇದನ್ನೂ ಓದಿ:   ಪ್ರಸವದ ವೇಳೆ ಕೆಸರಿನಲ್ಲಿ ಜಾರಿ ಬಿದ್ದ ಆನೆ ಮರಿ ಮೇಲೆತ್ತಲು ತಾಯಿ ಆನೆ ಪರದಾಟ, ಮನ ಕಲಕುವಂತ ವಿಡಿಯೋ

Follow us
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್