AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಯುಕ್ತ ಪಾಟೀಲ್ ಪತಿ ಬೀದರ್​ನವರು, ಆ ಲೋಕಸಭಾ ಕ್ಷೇತ್ರದ ಟಿಕೆಟ್ ಯಾಕೆ ಹೈಕಮಾಂಡ್ ಅವರಿಗೆ ನೀಡಲಿಲ್ಲ? ವೀಣಾ ಕಾಶಪ್ಪನವರ್

ಸಂಯುಕ್ತ ಪಾಟೀಲ್ ಪತಿ ಬೀದರ್​ನವರು, ಆ ಲೋಕಸಭಾ ಕ್ಷೇತ್ರದ ಟಿಕೆಟ್ ಯಾಕೆ ಹೈಕಮಾಂಡ್ ಅವರಿಗೆ ನೀಡಲಿಲ್ಲ? ವೀಣಾ ಕಾಶಪ್ಪನವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 29, 2024 | 3:00 PM

ಸಂಸತ್ ಚುನಾವಣೆಯ ಬಳಿಕ ಯಾವುದಾದರೂ ಸ್ಥಾನಮಾನ ನೀಡುವ ಬಗ್ಗೆ ಮುಖ್ಯಮಂತ್ರಿ ಭರವಸೆ ನೀಡಿಲ್ಲ ಎಂದ ವೀಣಾ ತನಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೇಳಿದ್ದರೂ ಸಂಸದೆಯಾಗಬೇಕೆಂಬ ಅದಮ್ಯ ಹಂಬಲದಿಂದ ಅದನ್ನು ನಿರಾಕರಿಸಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಕಾಯುತ್ತಿದ್ದೆ ಅಂತ ಹೇಳಿದರು.

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಮಾಧ್ಯಮಗಳ ಕಣ್ಣಿಗೆ ಬೀಳದ ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ (Veena Kashappanavar) ಇಂದು ಬೆಂಗಳೂರಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ ಗೆ (Samyukta Patil) ನೀಡಿದ್ದಕ್ಕೆ ತೀವ್ರ ನೊಂದುಕೊಂಡಿರುವ ವೀಣಾ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಮಾತುಕತೆ ನಡೆಸಿದ್ದಾರೆ. ಸಂಸತ್ ಚುನಾವಣೆಯ ಬಳಿಕ ಯಾವುದಾದರೂ ಸ್ಥಾನಮಾನ ನೀಡುವ ಬಗ್ಗೆ ಮುಖ್ಯಮಂತ್ರಿ ಭರವಸೆ ನೀಡಿಲ್ಲ ಎಂದ ವೀಣಾ ತನಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೇಳಿದ್ದರೂ ಸಂಸದೆಯಾಗಬೇಕೆಂಬ ಅದಮ್ಯ ಹಂಬಲದಿಂದ ಅದನ್ನು ನಿರಾಕರಿಸಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಕಾಯುತ್ತಿದ್ದೆ ಅಂತ ಹೇಳಿದರು.

ಆದರೆ ವರಿಷ್ಠರು ತನಗೆ ನಿರಾಶೆಗೊಳಿಸಿದರು ಮತ್ತು ತನ್ನ ಸಾಮರ್ಥ್ಯವನ್ನು ಕೇವಲ ಕ್ಷೇತ್ರದಲ್ಲಿ ಸಂಘಟನೆ ಕೆಲಸ ಮಾಡುವುದಕ್ಕೆ ಸೀಮಿತಗೊಳಿಸಿದರು ಎಂದು ವೀಣಾ ಹೇಳಿದರು. ಬಾಗಲಕೋಟೆ ಕ್ಷೇತ್ರದಲ್ಲಿ ತಾನು ಸ್ಥಳೀಯಳು ಮತ್ತು ಜನ ತನ್ನನ್ನು ಗುರುತಿಸುತ್ತಾರೆ ಆದರೆ ಸಂಯುಕ್ತ ಪಾಟೀಲ್ ಅವರ ಪತಿ ಬೀದರ್ ನವರು, ಅವರಿಗೆ ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಬಹುದಿತ್ತಲ್ಲ? ಅವರನ್ನು ಬಾಗಲಕೋಟೆಗೆ ಕರೆತರುವ ಅವಶ್ಯಕತೆ ಏನಿತ್ತು ಎಂದು ವೀಣಾ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪತಿಯನ್ನು ಎಳೆತರದೆ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಶಕ್ತಿ ನನಗಿದೆ: ವೀಣಾ ಕಾಶಪ್ಪನವರ್, ಕಾಂಗ್ರೆಸ್ ನಾಯಕಿ