Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿರುವಂತಿದೆ!

ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿರುವಂತಿದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 02, 2023 | 6:22 PM

ಚಿಕ್ಕಪುಟ್ಟ ನಾಯಕರು ಸಹ ತನ್ನ ವಿರುದ್ಧ ಮಾತಾಡುತ್ತಿರುವುದರಿಂದ ಸಿಡಿಮಿಡಿಗೊಳ್ಳುತ್ತಿರುವ ಶಿವಶಂಕರಪ್ಪನವರಿಗೆ ಮಾಧ್ಯಮ ಪ್ರತಿನಿಧಿಗಳು ಅದೇ ವಿಷಯದ ಬಗ್ಗೆ ಮಾತಾಡಿದಾಗ ಪುನಃ ಸಿಡುಕಿದ ಅವರು, ಅದನ್ನು ಸಿದ್ದರಾಮಯ್ಯ ಜೊತೆ ಮಾತಾಡಿ ಬಗೆಹರಿಸಿಕೊಳ್ಳುವುದಾಗಿ ಹೇಳಿದರು. ಲಿಂಗಾಯತ ಅಧಿಕಾರಿಗಳು ಬೇಕೆನ್ನುವ ವಾದಕ್ಕೆ ಅವರು ಜೋತುಬಿದ್ದಿರೋದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ದಾವಣಗೆರೆ: ಕಾಂಗ್ರೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಶಾಮನೂರು ಶಿವಶಂಕರಪ್ಪ (Shamanur Shivashankarappa), ಬಸವರಾಜ ರಾಯರೆಡ್ಡಿ, ಕೆಎನ್ ರಾಜಣ್ಣ, ಬಿಕೆ ಹರಿಪ್ರಸಾದ್ (BK Hariprasad) ಮೊದಲಾದ ಹಿರಿಯ ತಮ್ಮ ಮಾತಿಗೆ, ವಾದಕ್ಕೆ ಜೋತು ಬೀಳುವುದನ್ನು ಅಭ್ಯಾಸ ಮಾಡಿಕೊಂಡಂತಿದೆ. 93-ವರ್ಷ ವಯಸ್ಸಿನ ಶಿವಶಂಕರಪ್ಪ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ (Siddaramaiah government) ಲಿಂಗಾಯತ ಶಾಸಕ ಮತ್ತು ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಅಂತ ಹೇಳಿ ಆಶ್ಚರ್ಯ ಹುಟ್ಟಿಸಿದ್ದರು. ಅದಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಸಮಜಾಯಿಷಿ ನೀಡಿ ಯಾರಿಗೂ ಅನ್ಯಾಯವಾಗುತ್ತಿಲ್ಲ ಅಂದಿದ್ದರು. ಏತನ್ಮಧ್ಯೆ, ಕೆಲ ಕಾಂಗ್ರೆಸ್ ಶಾಸಕರು ಮತ್ತು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಶಿವಶಂಕರಪ್ಪನವರನ್ನು ತರಾಟೆಗೆ ತೆಗೆದುಕೊಂಡರು. ಚಿಕ್ಕಪುಟ್ಟ ನಾಯಕರು ಸಹ ತನ್ನ ವಿರುದ್ಧ ಮಾತಾಡುತ್ತಿರುವುದರಿಂದ ಸಿಡಿಮಿಡಿಗೊಳ್ಳುತ್ತಿರುವ ಶಿವಶಂಕರಪ್ಪನವರಿಗೆ ಮಾಧ್ಯಮ ಪ್ರತಿನಿಧಿಗಳು ಅದೇ ವಿಷಯದ ಬಗ್ಗೆ ಮಾತಾಡಿದಾಗ ಪುನಃ ಸಿಡುಕಿದ ಅವರು, ಅದನ್ನು ಸಿದ್ದರಾಮಯ್ಯ ಜೊತೆ ಮಾತಾಡಿ ಬಗೆಹರಿಸಿಕೊಳ್ಳುವುದಾಗಿ ಹೇಳಿದರು. ಲಿಂಗಾಯತ ಅಧಿಕಾರಿಗಳು ಬೇಕೆನ್ನುವ ವಾದಕ್ಕೆ ಅವರು ಜೋತುಬಿದ್ದಿರೋದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ