AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶನಿ ಭಗವಾನರ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ

ಶನಿ ಭಗವಾನರ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ

ಗಣಪತಿ ಶರ್ಮಾ
|

Updated on: Aug 29, 2026 | 6:15 AM

Share

ಟಿವಿ9 ಡಿಜಿಟಲ್ ವಾಹಿನಿಯ ದಿನಭವಿಷ್ಯದಲ್ಲಿ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 29ರ ಶ್ರಾವಣ ಶನಿವಾರದ ವಿಶೇಷತೆಗಳನ್ನು ವಿವರಿಸಿದ್ದಾರೆ. ಈ ದಿನದ ರಾಹುಕಾಲ, ಸರ್ವಸಿದ್ಧಿ ಕಾಲ, ಗ್ರಹಗಳ ಸಂಚಾರ ಹಾಗೂ ಪ್ರತಿ ರಾಶಿಯವರಿಗೆ ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿ, ಸಂಬಂಧಗಳು, ಅದೃಷ್ಟ ಸಂಖ್ಯೆ, ದಿಕ್ಕು ಮತ್ತು ಪೂಜಿಸಬೇಕಾದ ಮಂತ್ರಗಳ ಕುರಿತು ಸಮಗ್ರ ಭವಿಷ್ಯ ನೀಡಿದ್ದಾರೆ.

ಇಂದು 2026ರ ಆಗಸ್ಟ್ 29ರ, ಶನಿವಾರ, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ಕೃಷ್ಣ ಪಕ್ಷದ ಶ್ರಾವಣ ಶನಿವಾರವಾಗಿದೆ. ಈ ದಿನದ ರಾಹುಕಾಲ ಬೆಳಗ್ಗೆ 9.14 ರಿಂದ 10.47ರ ವರೆಗೆ ಇರಲಿದ್ದು, ಸರ್ವ ಸಿದ್ಧಿ ಕಾಲ ಮಧ್ಯಾಹ್ನ 1.53 ರಿಂದ 3.26ರ ವರೆಗೆ ಇರುತ್ತದೆ. ಈ ಶ್ರಾವಣ ಶನಿವಾರವು ಭಗವಂತನ ನಾಮಸ್ಮರಣೆಗೆ, ಬಾಂಧವ್ಯಗಳನ್ನು ಬೆಸೆಯಲು ಅತ್ಯಂತ ಶ್ರೇಷ್ಠ ದಿನ. ಪೂಜ್ಯ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ಹಾಗೂ ಗಾಯತ್ರಿಯ ಪ್ರತಿಪತ್ ದಿನವೂ ಹೌದು. ರವಿ ಸಿಂಹ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯ ಪೂರ್ವಾಭಾದ್ರ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾರೆ. ಮೇಷದಿಂದ ಮೀನದವರೆಗಿನ ಎಲ್ಲ ರಾಶಿಗಳಿಗೆ ಆರ್ಥಿಕ, ಕೌಟುಂಬಿಕ, ಆರೋಗ್ಯ, ಉದ್ಯೋಗ, ವ್ಯಾಪಾರ, ಪ್ರೇಮ, ರಾಜಕೀಯ ಮತ್ತು ಮಕ್ಕಳ ಭವಿಷ್ಯದ ಕುರಿತು ದಿನ ಭವಿಷ್ಯವನ್ನು ಪ್ರಸಿದ್ಧ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Follow Us