AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರಾಡಿ ಘಾಟ್ ಭೂಕುಸಿತ: ಸಕಲೇಶಪುರದಲ್ಲಿ ಸವಾರರಿಗೆ ನರಕ ದರ್ಶನ! ಅಸಲಿಗೆ ಆಗಿದ್ದೇನು ನೋಡಿ

ಶಿರಾಡಿ ಘಾಟ್ ಭೂಕುಸಿತ: ಸಕಲೇಶಪುರದಲ್ಲಿ ಸವಾರರಿಗೆ ನರಕ ದರ್ಶನ! ಅಸಲಿಗೆ ಆಗಿದ್ದೇನು ನೋಡಿ

ಮಂಜುನಾಥ ಕೆಬಿ
| Updated By: Ganapathi Sharma|

Updated on:Jun 26, 2025 | 9:19 AM

Share

ಹಾಸನ ಜಿಲ್ಲೆ ಸಕಲೇಶಪುರದ ಹೆಗ್ಗದ್ದೆ ಮಾರನಹಳ್ಳಿ ಬಳಿ ಭೂ ಕುಸಿತ ಸಂಭವಿಸಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ರಾತ್ರಿ ಶಿರಾಡಿ ಮಾರ್ಗವಾಗಿ ತೆರಳುತ್ತಿದ್ದ ನೂರಾರು ವಾಹನಗಳು ಅಲ್ಲಲ್ಲೇ ಬಾಕಿ ಆಗಿವೆ. ಬಸ್​, ಕಾರುಗಳಲ್ಲಿದ್ದ ಪ್ರಯಾಣಿಕರು ಆಹಾರ, ನೀರು ಇಲ್ಲದೆ ಒದ್ದಾಡಿದ್ದಾರೆ. ವಿಡಿಯೋ ಇಲ್ಲಿದೆ.

ಹಾಸನ, ಜೂನ್ 26: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಭಾರಿ ಮಳೆಯ ಪರಿಣಾಮ ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಮಾರನಹಳ್ಳಿ ಬಳಿ ಭೂ ಕುಸಿತ ಸಂಭವಿಸಿ ಶಿರಾಡಿ ಘಾಟ್​ ಮಾರ್ಗದಲ್ಲಿ ವಾಹನ ಸಂಚಾರ ಬಂದ್​​ ಆಗಿದೆ. ಪರಿಣಾಮವಾಗಿ ಸಕಲೇಶಪುರ ಬೈಪಾಸ್ ರಸ್ತೆ ಹಾಗೂ ಶಿರಾಡಿ ಘಾಟ್ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಿಲುಕಿವೆ. ಸಾಲು ಸಾಲು ನಿಂತಿರುವ ವಾಹನಗಳು ಮತ್ತು ಅಸಲಿಗೆ ಅಲ್ಲೇನಾಯ್ತು ಎಂಬುದರ ವಿಡಿಯೋ ವರದಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಭೂಕುಸಿತದಿಂದ ಶಿರಾಡಿ ಘಾಟ್​ ಮಾರ್ಗದಲ್ಲಿ ವಾಹನ ಸಂಚಾರ ಬಂದ್​​: ಬೆಂಗಳೂರು – ಮಂಗಳೂರು ಸಂಚಾರಕ್ಕೆ ಬದಲಿ ಮಾರ್ಗ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 26, 2025 09:18 AM