‘ನಾವು ಕೂಡ ಹಸು ಸಾಕ್ತೀವಿ’; ಮುಂದಿನ ಯೋಜನೆ ರಿವೀಲ್ ಮಾಡಿದ ಶಿವಣ್ಣ

Updated on: Aug 02, 2023 | 12:55 PM

ರಾಜ್​ಕುಮಾರ್ ಅವರು ರಾಯಭಾರಿ ಆದ ಸಂದರ್ಭದಲ್ಲಿ ನಂದಿನಿ ಸಂಸ್ಥೆಯವರು ಹಸುವನ್ನು ಅಣ್ಣಾವ್ರಿಗೆ ಉಡುಗೊರೆಯಾಗಿ ನೀಡಿದ್ದರು. ಈಗ ಶಿವಣ್ಣ ಕೂಡ ಹಸು ಸಾಕುವ ಪ್ಲ್ಯಾನ್​ನಲ್ಲಿದ್ದಾರೆ.

ಡಾ. ರಾಜ್​ಕುಮಾರ್ (Rajkumar) ಅವರು ನಂದಿನಿ ಪ್ರಾಡಕ್ಟ್​​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದರು. ರೈತರಿಗೆ ಸಹಕಾರಿ ಆಗುತ್ತದೆ ಎನ್ನುವ ಕಾರಣಕ್ಕೆ ಅವರು ಯಾವುದೇ ಸಂಭಾವನೆ ಪಡೆದಿರಲಿಲ್ಲ. ಪುನೀತ್ ರಾಜ್​ಕುಮಾರ್ ಕೂಡ ಹಾಗೆಯೇ ಮಾಡಿದ್ದರು. ಅವರು ಕೂಡ ನಂದಿನಿ ಪ್ರಾಡಕ್ಟ್​ ಜಾಹೀರಾತಿಗೆ ಹಣ ಪಡೆದಿಲ್ಲ. ಈಗ ಶಿವಣ್ಣ ಅವರು ಉಚಿತವಾಗಿ ಈ ಬ್ರ್ಯಾಂಡ್​ನ ಪ್ರಚಾರ ಮಾಡುತ್ತಿದ್ದಾರೆ. ರಾಜ್​ಕುಮಾರ್ ಅವರು ರಾಯಭಾರಿ ಆದ ಸಂದರ್ಭದಲ್ಲಿ ನಂದಿನಿ ಸಂಸ್ಥೆಯವರು ಹಸುವನ್ನು ಅಣ್ಣಾವ್ರಿಗೆ ಉಡುಗೊರೆಯಾಗಿ ನೀಡಿದ್ದರು. ಈಗ ಶಿವಣ್ಣ (Shivarajkumar) ಕೂಡ ಹಸು ಸಾಕುವ ಪ್ಲ್ಯಾನ್​ನಲ್ಲಿದ್ದಾರೆ. ‘ಕನಕಪುರದಲ್ಲಿ ಫಾರ್ಮ್​ಹೌಸ್ ಖರೀದಿಸಿದ್ದೇನೆ. ಅಲ್ಲಿ ಹಸು ಸಾಕುವ ಆಲೋಚನೆ ಇದೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Aug 02, 2023 12:54 PM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More