AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪುಗೆ ಆ ಒಂದು ಆಸೆಯಿತ್ತು, ಆದರೆ ನೆರವೇರಲಿಲ್ಲ: ಅಶ್ವಿನಿ ಪುನೀತ್ ರಾಜ್​ಕುಮಾರ್ ಬಿಚ್ಚಿಟ್ಟ ನೆನಪು

Ashwini Puneeth Rajkumar: ಪುನೀತ್ ರಾಜ್​ಕುಮಾರ್ ಅವರಿಗೆ ಇದ್ದ ಆಸೆಯ ಬಗ್ಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಮಾತನಾಡಿದ್ದಾರೆ.

ಅಪ್ಪುಗೆ ಆ ಒಂದು ಆಸೆಯಿತ್ತು, ಆದರೆ ನೆರವೇರಲಿಲ್ಲ: ಅಶ್ವಿನಿ ಪುನೀತ್ ರಾಜ್​ಕುಮಾರ್ ಬಿಚ್ಚಿಟ್ಟ ನೆನಪು
ಅಪ್ಪು-ಅಶ್ವಿನಿ
ಮಂಜುನಾಥ ಸಿ.
|

Updated on: Jul 25, 2023 | 10:18 PM

Share

ಪಿಆರ್​ಕೆ ಪ್ರೊಡಕ್ಷನ್ಸ್ ಅಪ್ಪು (Appu) ಕಂಡಿದ್ದ ಕನಸು. ಆ ಕನಸನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar) ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಪ್ಪು ಆಶಿಸಿದ್ದಂತೆಯೇ ಹೊಸಬರಿಗೆ ಅವಕಾಶಗಳನ್ನು ನೀಡುತ್ತಾ ಸಾಗುತ್ತಿದ್ದಾರೆ. ಪಿಆರ್​ಕೆ ಪ್ರೊಡಕ್ಷನ್​ನ (PRK Production) ಹೊಸ ಸಿನಿಮಾ ‘ಆಚಾರ್ ಆಂಡ್ ಕೋ’ ಇದೀಗ ಬಿಡುಗಡೆಗೆ ತಯಾರಾಗಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಹ ಭಾಗಿಯಾಗಿದ್ದಾರೆ. ಕನ್ನಡದ ಜನಪ್ರಿಯ ಫೂಡ್ ವ್ಲಾಗರ್ ಕೃಪಾಲ್ ಅಮನ್ನಾ ಅವರೊಟ್ಟಿಗಿನ ಸಂದರ್ಶನದಲ್ಲಿ ಅಶ್ವಿನಿ ಅವರು ಅಪ್ಪು ಅವರ ಬಗ್ಗೆ ಹಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅದರಲ್ಲಿಯೂ ಅಪ್ಪುಗೆ ಆಹಾರದ ಬಗ್ಗೆ ಇದ್ದ ಪ್ರೀತಿಯನ್ನು ಅಶ್ವಿನಿ ನೆನಪು ಮಾಡಿಕೊಂಡಿದ್ದಾರೆ.

ಒಮ್ಮೆ ಯಾವುದೋ ಸಿನಿಮಾದ ಶೂಟಿಂಗ್​ಗೆಂದು ಅಮೆರಿಕಕ್ಕೆ ಪುನೀತ್ ರಾಜ್​ಕುಮಾರ್ ತೆರಳಿದ್ದರಂತೆ. ಅವರೊಟ್ಟಿಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಹ ಇದ್ದರಂತೆ. ಅಲ್ಲಿ ಒಂದು ಕಾಫಿಚೈನ್​ನ ಕಾಫಿ ಪುನೀತ್​ಗೆ ಬಹಳ ಇಷ್ಟವಾಯ್ತಂತೆ. ಫಿಲ್ಟರ್ ಕಾಫಿಯಂತೆಯೇ ಅದರ ರುಚಿಯೂ ಇತ್ತೆಂಬುದು ಪುನೀತ್​ಗೆ ಆ ಕಾಫಿ ಹಿಡಿಸಲು ಇನ್ನೊಂದು ಕಾರಣ. ಅಲ್ಲದೆ ಪುನೀತ್ ಅವರಿಗೆ ಬನ್, ಬನ್ ಮಸ್ಕಾ, ಬನ್ ಜಾಮ್, ಖಾರಾ ಬನ್ ಇವುಗಳೆಲ್ಲ ಬಹಳ ಇಷ್ಟವಂತೆ. ಆಗ ಪುನೀತ್ ಹೇಳುತ್ತಿದ್ದರಂತೆ, ನಾನೊಂಬು ಕೆಫೆ ತೆರೆಯಬೇಕು ಎಂದು. ಆಗಾಗ್ಗೆ ಅದನ್ನು ಹೇಳುತ್ತಲೇ ಇರುತ್ತಿದ್ದರಂತೆ, ನಾನು ಒಮ್ಮೆಯಲ್ಲ ಒಮ್ಮೆ ಕೆಫೆ ತೆರೆದೇ ತೆರೆಯುತ್ತೇನೆ ಎನ್ನುತ್ತಿದ್ದರಂತೆ. ಆದರೆ ಅದು ಸಾಧ್ಯವಾಗಲಿಲ್ಲ” ಎಂದಿದ್ದಾರೆ ಅಶ್ವಿನಿ.

ಇದನ್ನೂ ಓದಿ:ಆತ್ಮೀಯತೆಯಿಂದ ಮಾತನಾಡಿದ ಶಿವರಾಜ್​ಕುಮಾರ್ ಹಾಗೂ ಅಶ್ವಿನಿ ಪುನೀತ್​ರಾಜ್​ಕುಮಾರ್; ಇಲ್ಲಿದೆ ವಿಡಿಯೋ

ಅದೇ ಸಂದರ್ಶನದಲ್ಲಿ, ಪುನೀತ್​ರ ಚಿತ್ರ ವಿಚಿತ್ರ ಅಡುಗೆ ಪ್ರಯೋಗಗಳ ಬಗ್ಗೆಯೂ ಮಾತನಾಡಿರುವ ಅಶ್ವಿನಿ, ನನ್ನ ಮಗಳಿಗೆ ಬೇಕಿಂಗ್ ಎಂದರೆ ಬಹಳ ಇಷ್ಟ. ಬಹಳ ಒಳ್ಳೆಯ ಡೆಸರ್ಟ್​ಗಳನ್ನು ಮಗಳು ಮಾಡುತ್ತಾಳೆ. ಎಲ್ಲವೂ ಯೂಟ್ಯೂಬ್ ನೋಡಿಯೇ ಕಲಿತಿದ್ದಾಳೆ. ನಾವು ಆಗ ಪ್ರತಿ ಭಾನುವಾರ ಟ್ರೆಸ್ ಲ್ಯಾಶಸ್ ಕೇಕ್ ತಿನ್ನಲು ಹೋಗುತ್ತಿದ್ದೆವು, ಒಮ್ಮೊಮ್ಮೆ ಮನೆಗೆ ತರಿಸಿಕೊಳ್ಳುತ್ತಿದ್ದೆವು. ಆದರೆ ಒಮ್ಮೆ ನನ್ನ ಮಗಳು ನಾನೇ ಮಾಡುತ್ತೇನೆ ಎಂದಳು. ಆದರೆ ಅಪ್ಪು, ಕೇಕ್ ಮಾಡಿ ಅದರ ಮೇಲೆ ಬೂಂದಿ ಹಾಕು ಚೆನ್ನಾಗಿರುತ್ತದೆ ಎಂದರು. ಮಗಳು ಸೇರಿ ಅದನ್ನು ಯಾರೂ ಒಪ್ಪಲಿಲ್ಲ. ಕೇಕ್ ಏನೋ ಅದ್ಭುತವಾಗಿ ಬಂತು. ಆದರೆ ಪುನೀತ್ ಮಾತ್ರ ಅದರ ಮೇಲೆ ಬೂಂದಿ ಉದುರಿಸಿಕೊಂಡು ತಿಂದು ಬಹಳ ಎಂಜಾಯ್ ಮಾಡಿದರು. ಆದರೆ ನಾವು ಅವರ ಪ್ರಯೋಗಕ್ಕೆ ಬಲಿಯಾಗದೆ ಬರೀ ಕೇಕ್ ತಿಂದೆವು ಎಂದು ನೆನಪಿಸಿಕೊಂಡು ನಕ್ಕರು ಅಶ್ವಿನಿ ಪುನೀತ್ ರಾಜ್​ಕುಮಾರ್.

ಇದೇ ಸಂದರ್ಶನದಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ತಮ್ಮ ಅಡುಗೆ ಪ್ರೀತಿ, ಯಾವ ಆಹಾರ ಇಷ್ಟ, ತಮ್ಮ ‘ಆಚಾರ್ ಆಂಡ್ ಕೋ’ ಸಿನಿಮಾದ ಬಗ್ಗೆ, ಸಿನಿಮಾದಲ್ಲಿನ ಮಹಿಳಾ ಪ್ರಾಧಾನ್ಯತೆಯ ಕೊರತೆ ಬಗ್ಗೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ನಿರ್ಮಾಣ ಮಾಡಿರುವ ‘ಆಚಾರ್ ಆಂಡ್ ಕೋ’ ಸಿನಿಮಾ ಜುಲೈ 28ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?