‘ಕಬ್ಜ’ ತಂಡಕ್ಕೆ ಶಿವರಾಜ್​ಕುಮಾರ್​ ಕಿವಿಮಾತು; ಇದನ್ನು ಪಾಲಿಸ್ತಾರಾ ನಿರ್ದೇಶಕರು?

ಸಿನಿಮಾ ಪದೇಪದೇ ವಿಳಂಬವಾಗುತ್ತಿರುವುದು ಸಿನಿಪ್ರಿಯರಿಗೆ ಬೇಸರ ತರಿಸಿದೆ. ಈ ವಿಚಾರದಲ್ಲಿ ನಟ ಶಿವರಾಜ್​ಕುಮಾರ್​ ಅವರಿಗೂ ಬೇಸರ ಇದೆ! ಈ ಬಗ್ಗೆ ‘ಸಲಗ’ ಚಿತ್ರದ ಸಕ್ಸಸ್​ ಮೀಟ್​ನಲ್ಲಿ ಶಿವಣ್ಣ ಮಾತನಾಡಿದ್ದಾರೆ.

‘ಕಬ್ಜ’ ತಂಡಕ್ಕೆ ಶಿವರಾಜ್​ಕುಮಾರ್​ ಕಿವಿಮಾತು; ಇದನ್ನು ಪಾಲಿಸ್ತಾರಾ ನಿರ್ದೇಶಕರು?
| Updated By: ರಾಜೇಶ್ ದುಗ್ಗುಮನೆ

Updated on: Feb 05, 2022 | 3:35 PM

ಉಪೇಂದ್ರ (Upendra)  ಹಾಗೂ ಸುದೀಪ್ (Sudeep)​ ಅಭಿನಯಿಸುತ್ತಿರುವ ‘ಕಬ್ಜ’ (Kabza) ಸಿನಿಮಾ ಸೆಟ್ಟೇರಿ ಸಾಕಷ್ಟು ಸಮಯ ಕಳೆದಿದೆ. ಕೊವಿಡ್​ ಕಾರಣದಿಂದ ಚಿತ್ರದ ಶೂಟಿಂಗ್​ ವಿಳಂಬವಾಗುತ್ತಿದೆ. ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಅನ್ನೋದು ಇನ್ನೂ ಘೋಷಣೆ ಆಗಿಲ್ಲ. ಈ ಚಿತ್ರದ ಪೋಸ್ಟರ್​ಗಳು ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿವೆ. ಸಿನಿಮಾ ನೋಡಬೇಕೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಸಿನಿಮಾ ಪದೇಪದೇ ವಿಳಂಬವಾಗುತ್ತಿರುವುದು ಸಿನಿಪ್ರಿಯರಿಗೆ ಬೇಸರ ತರಿಸಿದೆ. ಈ ವಿಚಾರದಲ್ಲಿ ನಟ ಶಿವರಾಜ್​ಕುಮಾರ್​ ಅವರಿಗೂ ಬೇಸರ ಇದೆ! ಈ ಬಗ್ಗೆ ‘ಸಲಗ’ ಚಿತ್ರದ ಸಕ್ಸಸ್​ ಮೀಟ್​ನಲ್ಲಿ ಶಿವಣ್ಣ ಮಾತನಾಡಿದ್ದಾರೆ. ‘ಕಬ್ಜ’ ಚಿತ್ರದ ನಿರ್ದೇಶಕ ಆರ್​.ಚಂದ್ರು ಅವರು ಸಕ್ಸಸ್​ ಮೀಟ್​ನಲ್ಲಿ ಪಾಲ್ಗೊಡಿದ್ದರು. ಈ ವೇಳೆ ಶಿವಣ್ಣ ಅವರು ಆರ್​. ಚಂದ್ರುಗೆ ಕಿವಿಮಾತೊಂದನ್ನು ಹೇಳಿದರು. ಅದೇನು ಎಂಬುದನ್ನು ನೋಡಲು ವಿಡಿಯೋ ವೀಕ್ಷಿಸಿ.

ಇದನ್ನೂ ಓದಿ: ‘ಗೀತಾ ಅವರು ತಾಯಿ ಸ್ಥಾನದಲ್ಲಿ ಇದ್ದಾರೆ’; ಮೈಸೂರಿನ ಶಕ್ತಿಧಾಮದ ಬಗ್ಗೆ ಶಿವರಾಜ್​ಕುಮಾರ್​ ಮಾತು

Allu Arjun: ಶಿವರಾಜ್​ಕುಮಾರ್​ ಅವರನ್ನು ಭೇಟಿ ಮಾಡಿದ ಅಲ್ಲು ಅರ್ಜುನ್; ಇಲ್ಲಿವೆ ಫೋಟೋಗಳು

Follow us