AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ನನ್ನೆರಡು ಕಣ್ಣುಗಳಿದ್ದಂತೆ, ಕಣ್ಣುಗಳಲ್ಲಿ ತಾರತಮ್ಯ ಮಾಡಲಾಗದು: ಪ್ರದೀಪ್ ಈಶ್ವರ್

ಸಿದ್ದರಾಮಯ್ಯ ಮತ್ತು ಶಿವಕುಮಾರ್ ನನ್ನೆರಡು ಕಣ್ಣುಗಳಿದ್ದಂತೆ, ಕಣ್ಣುಗಳಲ್ಲಿ ತಾರತಮ್ಯ ಮಾಡಲಾಗದು: ಪ್ರದೀಪ್ ಈಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 30, 2025 | 10:16 PM

Share

ಮೊದಲಬಾರಿಗೆ ಶಾಸಕ ಮತ್ತು ಉದಯನ್ಮೋಖ ರಾಜಕಾರಣಿಯಾಗಿರುವ ತನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎರಡು ಕಣ್ಣುಗಳಿದ್ದಂತೆ, ಎರಡು ಕಣ್ಣುಗಳ ನಡುವೆ ಯಾರಾದರೂ ತಾರತಮ್ಯ ಮಾಡೋದು ಸಾಧ್ಯವೇ? ಪಕ್ಷದ ಒಬ್ಬ ಸಾಮಾನ್ಯ ಕರ್ತನಾಗಿರುವ ತನಗೆ ಯಾರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಅಂತ ಹೇಳುವುದು ಸಾಧ್ಯವಿಲ್ಲ, ಎಂದು ಪ್ರದೀಪ್ ಈಶ್ವರ್ ಹೇಳಿದರು.

ಬೆಂಗಳೂರು, ಜೂನ್ 30: ನಗರದಲ್ಲಿಂದು ರಂದೀಪ್ ಸುರ್ಜೆವಾಲಾ (Randeep Surjewala) ಅವರನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕಳೆದ ಎರಡು ವರ್ಷಗಳಲ್ಲಿ ತಮ್ಮ ಕ್ಷೇತ್ರಕ್ಕೆ ಮಾಡಿದ ಕೆಲಸಗಳನ್ನು ವಿವರಿಸಿದರು. ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದ ಮೂಲಕ ಅವರು ತಮ್ಮ ಕ್ಷೆತ್ರದ ಎಲ್ಲ ಊರುಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರಂತೆ. ನಮಸ್ತೆ ಚಿಕ್ಕಾಬಳ್ಳಾಪುರ ಕಾರ್ಯಕ್ರಮದ ಭಾಗವಾಗಿ ಅವರು ಕ್ಷೇತ್ರದಲ್ಲಿರುವ ಎಲ್ಲ ಮನೆಗಳಿಗೆ ಭೇಟಿ ನೀಡುತ್ತಿದ್ದಾರಂತೆ. ತಮ್ಮ ಸ್ವಂತ ಖರ್ಚಿನಿಂದ ಅವರು ಕ್ಷೇತ್ರದ ಜನರಿಗೆ ನಮ್ಮ ಅಂಬ್ಯುಲೆನ್ಸ್ ಕಾರ್ಯಕ್ರಮದ ಮೂಲಕ ನೆರವು ಅಗತ್ಯ ಇರುವವರಿಗೆ 12 ನಿಮಿಷಗಳಲ್ಲಿ ಅಂಬ್ಯುಲೆನ್ಸ್ ಸೇವೆ ಸಿಗುವ ವ್ಯವಸ್ಥೆ ಮಾಡಿದ್ದಾರಂತೆ. ಹಾಗೆಯೇ ಪ್ರದೀಪ್ ಈಶ್ವರ್ ಅವರು ಡಿಜಿಟಲ್ ಚಿಕ್ಕಬಳ್ಳಾಪುರ ಕಾರ್ಯಕ್ರಮದಡಿ, ಎಲ್ಲರ ಮನೆಗಳಿಗೆ ಕ್ಯೂಅರ್ ಕೋಡ್ ಲಗತ್ತಿಸಿ ಅದನ್ನು ಸ್ಕ್ಯಾನ್ ಮಾಡುವ ಮೂಲಕ ಜನ ಶಾಸಕನ ಸಂಪರ್ಕ ಪಡೆದು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದಂತೆ.

ಇದನ್ನೂ ಓದಿ:   ದೊಡ್ಡದಾಗಿ ಮಾತಾಡುವ ಪ್ರದೀಪ್ ಈಶ್ವರ್ ಬಲಿಜ ಸಮುದಾಯಕ್ಕೆ ನೀಡಿರುವ ಕೊಡುಗೆ ಏನು? ಪಿಸಿ ಮೋಹನ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ