ಸಿದ್ದರಾಮಯ್ಯ ಮತ್ತು ಶಿವಕುಮಾರ್ ದಿಗ್ಗಜರು, ಧೀಮಂತ ನಾಯಕರು ಮತ್ತು ಮಣ್ಣಿನ ಮಕ್ಕಳು: ಸೋಮಶೇಖರ್
ರಾಜಕೀಯವಾಗಿ ಬೆಳೆಯಲು ತನಗೆ ಎಲ್ಲ ರೀತಿಯ ಮತ್ತು ಪ್ರತಿ ಹಂತದಲ್ಲಿ ಸಹಾಯ ಮಾಡಿದ್ದು ಶಿವಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅವರು ಅದರ ಅಭಿವೃದ್ಧಿಗೆ ಪಣತೊಟ್ಟು ನಿಂತಿದ್ದಾರೆ, ನಗರದಲ್ಲಿ ವ್ಹೈಟ್ ಟಾಪಿಂಗ್ ಮತ್ತು ಪ್ರಮುಖ ರಸ್ತೆಗಳ ಡಾಂಬರೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ, ಬೆಂಗಳೂರು ಅಬಿವೃದ್ಧಿಗೆ ಸಿಎಂ 1ಲಕ್ಷ ಕೋಟಿ ರೂ ಬಿಡುಗಡೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಹೇಳಿದರು.
ಬೆಂಗಳೂರು, ಏಪ್ರಿಲ್ 18: ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಈ ಪಾಟಿ ಹೊಗಳಿರಲಿಕ್ಕಿಲ್ಲ. ಎಸ್ ಟಿ ಸೋಮಶೇಖರ್ ಹಿಂದೆ ಕಾಂಗ್ರೆಸ್ನಲ್ಲಿದ್ದಿದ್ದು ನಿಜ, ಅದರೆ ಅವರೀಗ ಬಿಜೆಪಿಯ ಹಾಲಿ ಸದಸ್ಯರು. ಇವತ್ತು ನಗರದಲ್ಲಿ ನಡೆದ ಕಲಿದೇವ ಕನ್ವೆನ್ಶನ್ ಹಾಲ್ ಉದ್ಘಾಟನಾ ಸಮಾರಂಭದಲ್ಲಿ ಸೋಮಶೇಖರ್, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (Siddaramaiah and DK Shivakumar) ಅವರನ್ನು ಮನಸಾರೆ ಕೊಂಡಾಡುತ್ತಾ ಕರ್ನಾಟಕ ರಾಜಕೀಯದ ದಿಗ್ಗಜರು, ಧೀಮಂತ ನಾಯಕರು ಮಣ್ಣಿನ ಮಕ್ಕಳು, ಒಗ್ಗಟ್ಟಾಗಿ ಬೆಂಗಳೂರು ಮತ್ತು ಕರ್ನಾಟಕ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ:ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ನೋಟೀಸ್ ಇಲ್ಲ, ಅದರೆ ನನಗೆ ನೀಡುತ್ತಾರೆ: ಸೋಮಶೇಖರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ