Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯರಿಂದ ಮೆಚ್ಚುಗೆ ಪಡೆಯುವಷ್ಟು ಚೆನ್ನಾಗಿ ಚಾಮುಂಡೇಶ್ವರಿಯಲ್ಲಿ ಕೆಲಸ ಮಾಡಿದ್ದೇನೆ: ಜಿಟಿ ದೇವೇಗೌಡ

ಸಿದ್ದರಾಮಯ್ಯರಿಂದ ಮೆಚ್ಚುಗೆ ಪಡೆಯುವಷ್ಟು ಚೆನ್ನಾಗಿ ಚಾಮುಂಡೇಶ್ವರಿಯಲ್ಲಿ ಕೆಲಸ ಮಾಡಿದ್ದೇನೆ: ಜಿಟಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 28, 2024 | 12:54 PM

ತನ್ನ 15ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಬಳಿಕ ಇಲ್ಲಿಯವರೆಗೆ ಸುಮಾರು 54 ವರ್ಷಗಳ ಕಾಲ ಸಾರ್ವಜನಿಕ ಬದುಕಿನಲ್ಲಿ ತೊಡಗಿಸಿಕೊಂಡಿದ್ದರೂ ತನ್ನ ಮತ್ತು 15 ವರ್ಷಗಳಿಂದ ಜನಸೇವೆ ಮಾಡುತ್ತಿರುವ ತನ್ನ ಮಗ ಹಾಗೂ ಶಾಸಕ ಹರೀಶ್ ಗೌಡನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ ಎಂದು ದೇವೇಗೌಡ ಹೇಳಿದ್ದು ರೇವಣ್ಣರನ್ನು ಮೂದಲಿಸುವಂತಿತ್ತು. 

ಮೈಸೂರು: ತಮ್ಮ ವಿರುದ್ಧ ಹೆಚ್ ಡಿ ರೇವಣ್ಣ ಮಾಡಿರುವ ಟೀಕೆಗಳಿಂದ ಜೆಡಿಎಸ್ ಹಿರಿಯ ನಾಯಕ ಮತ್ತು ಶಾಸಕ ಜಿಟಿ ದೇವೇಗೌಡ ನೊಂದುಕೊಂಡಿದ್ದಾರೆ. ಇವತ್ತು ನಗರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಅವರು, ಸಾಮಾನ್ಯವಾಗಿ ತಾನು ಮಾಧ್ಯಮಗಳಿಂದ ದೂರವಿರುತ್ತೇನೆ ಮತ್ತು ತನ್ನ ಗಮನವೆಲ್ಲ ಚಾಮುಂಡೇಶ್ವರಿ ಕ್ಷೇತ್ರದ ಅಬಿವೃದ್ಧಿ ಮೇಲೆ ನೆಟ್ಟಿರುತ್ತದೆ, ಜನರ ಸಮಸ್ಯೆಗಳನ್ನು ಅಲಿಸಿ ಪರಿಹಾರಗಳನ್ನು ಒದಗಿಸುವುದು ತನಗೆ ಇಷ್ಟವಾಗುವ ಕೆಲಸವಾಗಿದೆ ಎಂದು ಹೇಳಿ, ತಾನು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದಲೂ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕಾಂಗ್ರೆಸ್ ಸೇರ್ಪಡೆ ಚರ್ಚೆ​ ಬಗ್ಗೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದಿಷ್ಟು