AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿಕೊಳ್ಳಲು ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ವಾಪಸ್ಸು

ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿಕೊಳ್ಳಲು ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ವಾಪಸ್ಸು

ಅರುಣ್​ ಕುಮಾರ್​ ಬೆಳ್ಳಿ
|

Updated on: May 30, 2024 | 3:00 PM

ಅಭ್ಯರ್ಥಿಗಳ ಆಯ್ಕೆ ಕೈಕಮಾಂಡ್ ಗೂ ಕಠಿಣ ಸವಾಲಾಗಿದೆ ಯಾಕೆಂದರೆ ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಸುಮಾರು 300 ಕಾಂಗ್ರೆಸ್ ಮುಖಂಡರು ಆಕಾಂಕ್ಷಿಗಳಾಗಿದ್ದಾರೆ. ರಾಷ್ಟ್ರದ ರಾಜಧಾನಿಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆಯಾಗಿ ಓಡಾಡಿದರು. ಇವತ್ತು ಬರುವಾಗ ಕರ್ನಾಟಕ ಭವನದಿಂದ ವಿಮಾನ ನಿಲ್ದಾಣದ ಕಡೆ ಹೊರಟ ಕಾರಲ್ಲಿ ಸಿದ್ದರಾಮಯ್ಯ ಮಾತ್ರ ಕಾಣಿಸುತ್ತಾರೆ.

ದೆಹಲಿ: ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ವರಿಷ್ಠರಿಂದ ಫೈನಲ್ ಮಾಡಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ದೆಹಲಿಗೆ ಆಗಮಿಸಿದ್ದನ್ನು ನಾವು ನಿನ್ನೆ ವರದಿ ಮಾಡಿದ್ದೇವೆ. ನಿನ್ನೆ ಸಾಯಂಕಾಲ ಅವರಿಬ್ಬರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ (Randeep Surjewala) ಅವರ ನಿವಾಸದಲ್ಲಿ ಕಾಣಿಸಿಕೊಂಡಿದ್ದರು. ಅಭ್ಯರ್ಥಿಗಳ ಆಯ್ಕೆ ಕೈಕಮಾಂಡ್ ಗೂ ಕಠಿಣ ಸವಾಲಾಗಿದೆ ಯಾಕೆಂದರೆ ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಸುಮಾರು 300 ಕಾಂಗ್ರೆಸ್ ಮುಖಂಡರು ಆಕಾಂಕ್ಷಿಗಳಾಗಿದ್ದಾರೆ. ರಾಷ್ಟ್ರದ ರಾಜಧಾನಿಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆಯಾಗಿ ಓಡಾಡಿದರು. ಇವತ್ತು ಬರುವಾಗ ಕರ್ನಾಟಕ ಭವನದಿಂದ ವಿಮಾನ ನಿಲ್ದಾಣದ ಕಡೆ ಹೊರಟ ಕಾರಲ್ಲಿ ಸಿದ್ದರಾಮಯ್ಯ ಮಾತ್ರ ಕಾಣಿಸುತ್ತಾರೆ. ಶಿವಕುಮಾರ್ ಬೇರೆ ಕಾರಲ್ಲಿದ್ದಿರಬಹುದು. ನಮ್ಮ ದೆಹಲಿ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಮುಖ್ಯಮಂತ್ರಿಯವರ ಜೊತೆ ಸಾರಿಗೆ ಸಚಿವ ರಾಲಿಂಗಾರೆಡ್ಡಿ ಇದ್ದರು. ನಿನ್ನೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆ ಸುರ್ಜೆವಾಲಾ ಮನೆಯಂಗಳದಲ್ಲಿ ಕಾಣಿಸಿದ್ದ ಭೈರತಿ ಸುರೇಶ್ ಮುಖ್ಯಮಂತ್ರಿಯವರ ಕಾರಲ್ಲಿ ಕಾಣಿಸಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕುಮಾರಸ್ವಾಮಿಯವರು ರಾಕೇಶ್ ಸಿದ್ದರಾಮಯ್ಯ ಎಳೆತಂದಿದ್ದು ಮೂರ್ಖತನ: ಸಿದ್ದರಾಮಯ್ಯ