ಸಚಿವ ಅಶೋಕ ಮಾಡಿದ್ದೀರಿ ಅಂತ ಹೇಳಿದಾಗ ಮಾಡಿದ್ದೀವಿ ಅಂತ್ಹೇಳಿ ಅಂತ ತಿದ್ದಿದರು ವಿಪಕ್ಷ ನಾಯಕ ಸಿದ್ದರಾಮಯ್ಯ!
ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಎದ್ದುನಿಂತು ಕಂದಾಯ ಸಚಿವರ ಮಾತಿನಿಂದ ಆಗುವ ಅಪಾರ್ಥಗಳನ್ನು ವಿವರಿಸಿದರು.
ಬೆಂಗಳೂರು: ಕಂದಾಯ ಸಚಿವ ಆರ್ ಅಶೋಕ ಅವರು ಮಾತಾಡುವ ರೀತಿಯೇ ಹಾಗೆ. ಹೋಗಿದ್ದೀವಿ ಅನ್ನೋದಕ್ಕೆ ಹೋಗಿದ್ದೀರಿ, ಬಂದಿದ್ದೀವಿ ಅನ್ನಲು ಬಂದಿದ್ದೀರಿ, ನೋಡಿದ್ದೀವಿಗೆ ನೋಡಿದ್ದೀರಿ, ಮಾಡಿದ್ದೀವಿ ಅನ್ನಲು ಮಾಡಿದ್ದೀರಿ ಅನ್ನುತ್ತಾರೆ. ಭಾಷೆಯಲ್ಲಿ ಯಡವಟ್ಟಾದರೆ ಕೂಡಲೇ ಕಾಲೆಳೆಯುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಸದನದಲ್ಲಿ ಅದನ್ನೇ ಮಾಡಿದಾಗ, ಸಚಿವರು ಇದು ಬೆಂಗಳೂರು ಭಾಷೆ ಅಂತ ಸಮರ್ಥಸಿಕೊಳ್ಳಲು ಪ್ರಯತ್ನಿಸಿದರು. ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಎದ್ದುನಿಂತು ಕಂದಾಯ ಸಚಿವರ ಮಾತಿನಿಂದ ಆಗುವ ಅಪಾರ್ಥಗಳನ್ನು ವಿವರಿಸಿದರು.
Latest Videos

Daily Devotional: ದಕ್ಷಿಣಾಯನದ ಮಹತ್ವ ಹಾಗೂ ಇದರ ಫಲ ತಿಳಿಯಿರಿ

ಸರ್ಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು

ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್

ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
