ಕರುನಾಡ ಜನತೆಗೆ ಕೈ ಮುಗಿದ ಸಿದ್ದರಾಮಯ್ಯ ಪೋಸ್ಟ್ ನಲ್ಲೇನಿದೆ?

Updated on: May 28, 2026 | 7:22 PM

ಸಿದ್ದರಾಮಯ್ಯನವರ ಅಭಿಮಾನಿಗಳು, ಆಪ್ತರು ಕಣ್ಣೀರ ಕಟ್ಟೆ ಹೊಡೆದಿದೆ. ಸಿದ್ದರಾಮಯ್ಯನವರ ರಾಜೀನಾಮೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಅವರ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಕಾಂಗ್ರೆಸ್ ಹೈಕಮಾಂಡ್ ನಡೆಗೆ ಆಕ್ರೋಶ ಹೊರಕಿದ್ದಾರೆ. ಹೀಗೆ ಅಪಾರ ಅಭಿಮಾನಿಗಳು ಹೊಂದಿದ ಜನಪ್ರಿಯ ರಾಜಕಾರಣಿ ಸಿದ್ದರಾಮಯ್ಯನವರ ರಾಜೀನಾಮೆ ನೀಡದ ಬಳಿಕ ಒಂದು ಪೋಸ್ಟ್ ಮಾಡಿದ್ದು, ಕರುನಾಡಿನ ಜನತೆಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಪಕ್ಷ ಭೇದ,ಭಾವ ಇಲ್ಲದೇ ಜಾತಿ-ಧರ್ಮವಿಲ್ಲದೇ ಪ್ರತಿಯೊಬ್ಬ ಕನ್ನಡಿಗನಿಗೆ ಕೈಮುಗಿದು ಧನ್ಯವಾದ ಹೇಳಿದ್ದಾರೆ.

ಬೆಂಗಳೂರು, (ಮೇ 28): ಬಡವರಿಗೆ ಭಾಗ್ಯಗಳ ಕೊಟ್ಟ ಸರದಾರ.. ಹಸಿದವರಿಗೆ ಅನ್ನ ನೀಡಿದ ಅನ್ನರಾಮಯ್ಯ.. ರೈತರ ಧ್ವನಿಯಾಗಿದ್ದ ರೈತರಾಮಯ್ಯ, ಕನ್ನಡ ನಾಡು ನುಡಿಗಾಗಿ ದಿಟ್ಟ ಹೆಜ್ಜೆ ಇಟ್ಟ ಕನ್ನಡ ರಾಮಯ್ಯ.. ದಾಖಲೆ ಬಜೆಟ್ ಮಂಡಿಸಿದ ಬಜೆಟ್ ರಾಮಯ್ಯ. ವಿಧಾನಸಭೆಯಲ್ಲಿ ಎದುರಾಳಿಗಳನ್ನ ಮಾತಿನಲ್ಲೇ ಕಟ್ಟಿಹಾಕುತ್ತಿದ್ದ ಸಿದ್ದರಾಮಯ್ಯ, ತಮ್ಮ ಕೆಲಸಗಳಿಂದಲೇ ನಾನಾ ಹೆಸರಿನಿಂದ ಕರೆಸಿಕೊಂಡವರು. ಇಂತಹ ಸಿದ್ದರಾಮಯ್ಯ (Siddaramaiah) ಇವತ್ತು ಮುಖ್ಯಮಂತ್ರಿ ಪದವಿಯನ್ನೇ ತ್ಯಾಗ ಮಾಡಿ ತ್ಯಾಗರಾಮಯ್ಯರಾಗಿದ್ದಾರೆ. ಎದೆಭಾರ ಮಾಡಿಕೊಂಡೇ ತನ್ನ ಆಪ್ತ ಭೈರತಿ ಸುರೇಶ್ ಕಾರು ಹತ್ತಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಹೋರಾಟಗಾರನ ಆಡಳಿತ ಅಂತ್ಯವಾಗಿದೆ.

ಇನ್ನೊಂದೆಡೆ ಸಿದ್ದರಾಮಯ್ಯನವರ ಅಭಿಮಾನಿಗಳು, ಆಪ್ತರು ಕಣ್ಣೀರ ಕಟ್ಟೆ ಹೊಡೆದಿದೆ. ಸಿದ್ದರಾಮಯ್ಯನವರ ರಾಜೀನಾಮೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಅವರ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಕಾಂಗ್ರೆಸ್ ಹೈಕಮಾಂಡ್ ನಡೆಗೆ ಆಕ್ರೋಶ ಹೊರಕಿದ್ದಾರೆ. ಹೀಗೆ ಅಪಾರ ಅಭಿಮಾನಿಗಳು ಹೊಂದಿದ ಜನಪ್ರಿಯ ರಾಜಕಾರಣಿ ಸಿದ್ದರಾಮಯ್ಯನವರ ರಾಜೀನಾಮೆ ನೀಡದ ಬಳಿಕ ಒಂದು ಪೋಸ್ಟ್ ಮಾಡಿದ್ದು, ಕರುನಾಡಿನ ಜನತೆಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಪಕ್ಷ ಭೇದ,ಭಾವ ಇಲ್ಲದೇ ಜಾತಿ-ಧರ್ಮವಿಲ್ಲದೇ ಪ್ರತಿಯೊಬ್ಬ ಕನ್ನಡಿಗನಿಗೆ ಕೈಮುಗಿದು ಧನ್ಯವಾದ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us