ಕಾಮಗಾರಿ ಹಿನ್ನೆಲೆಯಲ್ಲಿ ನಂದಿಹಿಲ್ಸ್​ಗೆ ಹೋಗುವ ರಸ್ತೆಗಳು ಇಂದಿನಿಂದ ಒಂದು ತಿಂಗಳವರೆಗೆ ಬಂದ್

Updated on: Mar 24, 2025 | 10:34 AM

ಪ್ರೇಮಿಗಳು ಮತ್ತು ವಿಹಾರಪ್ರಿಯರು ಬಹಳ ನಿರಾಶರಾಗುವ ಅವಶ್ಯಕತೆ ಇಲ್ಲ. ಸಮಾಧಾನಕಾರ ಸಂಗತಿಯೇನೆಂದರೆ, ಜಿಲ್ಲಾಡಳಿತವು ವೀಕೆಂಡ್​ನಲ್ಲಿ ಪ್ರವಾಸಿಗರು ನಂದಿಧಾಮಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಿದೆ. ಶುಕ್ರವಾರ ಸಾಯಂಕಾಲ 6.30 ರಿಂದ ಸೋಮವಾರ ಬೆಳಗ್ಗೆ 8 ಗಂಟೆಯವರೆಗೆ ನಂದಿಹಿಲ್ಸ್ ಗೆ ಹೋಗುವ ರಸ್ತೆಗಳು ಓಪನ್ನಾಗಿರುತ್ತವೆ. ಪ್ರವಾಸಿಗರು ದಿನ ಮತ್ತು ಸಮಯವನ್ನು ನೆನಪಿಟ್ಟುಕೊಂಡಿರಬೇಕು.

ಚಿಕ್ಕಬಳ್ಳಾಪುರ, 24 ಮಾರ್ಚ್ : ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಯಲ್ಲಿ ವಾಸವಾಗಿರುವ ಜನರ ಅದರಲ್ಲೂ ವಿಶೇಷವಾಗಿ ಪ್ರೇಮಿಗಳ ಅಚ್ಚುಮೆಚ್ಚಿನ ವಿಹಾರ ತಾಣವಾಗಿರುವ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಗಿರಿಧಾಮ, ಸರಳವಾಗಿ ಹೇಳುವುದಾದರೆ ನಂದಿ ಹಿಲ್ಸ್ ಒಂದು ತಿಂಗಳು ಅವಧಿಯವರೆಗೆ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಭಾಗದಲ್ಲಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಪ್ರವಾಸಿಗರು ಮತ್ತು ವಿಹಾರಿಗಳು 25ಏಪ್ರಿಲ್, 2025 ರವರೆಗೆ ಇಲ್ಲಿಗೆ ಬರುವುದನ್ನು ಪ್ರತಿಬಂಧಿಸಲಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಯನಾಡು ರೀತಿ ನಂದಿ ಹಿಲ್ಸ್ ಕೂಡ ಕುಸಿಯುತ್ತಂತೆ; ಭೂ ವಿಜ್ಞಾನಿಗಳಿಂದ ಹೊರ ಬಿತ್ತು ಆತಂಕಕಾರಿ ವಿಷಯ 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More