AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿಯ ಚಿರಂಜೀವಿ ಸರ್ಜಾ ನಟಿಸಿದ ಕೊನೇ ಸಿನಿಮಾ ‘ರಾಜಮಾರ್ತಾಂಡ’ ನೋಡಿ ಸುಂದರ್​ ರಾಜ್​ ಹೇಳಿದ್ದೇನು?

ಅಳಿಯ ಚಿರಂಜೀವಿ ಸರ್ಜಾ ನಟಿಸಿದ ಕೊನೇ ಸಿನಿಮಾ ‘ರಾಜಮಾರ್ತಾಂಡ’ ನೋಡಿ ಸುಂದರ್​ ರಾಜ್​ ಹೇಳಿದ್ದೇನು?

TV9 Web
| Updated By: ಮದನ್​ ಕುಮಾರ್​|

Updated on: Apr 09, 2022 | 10:13 AM

Share

ಸುಂದರ್​ ರಾಜ್​ ಅವರು ಈಗಾಗಲೇ ‘ರಾಜಮಾರ್ತಾಂಡ’ ಚಿತ್ರ ನೋಡಿದ್ದಾರೆ. ಅಳಿಯನ ಸಿನಿಮಾ ಬಗ್ಗೆ ಅವರು ಮನಸಾರೆ ಮಾತನಾಡಿದ್ದಾರೆ.

ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ (Chiranjeevi Sarja) ಅಭಿನಯದ ಕೊನೇ ಸಿನಿಮಾ ‘ರಾಜಮಾರ್ತಾಂಡ’ (Rajamarthanda Movie) ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿರು ನಿಧನದ ಬಳಿಕ ನೋವಿನಲ್ಲಿರುವ ಅಭಿಮಾನಿಗಳು ಈ ಸಿನಿಮಾ ನೋಡಲು ಕಾದಿದ್ದಾರೆ. ಈ ಚಿತ್ರಕ್ಕೆ ರಾಮ್​ ನಾರಾಯಣ್​ ನಿರ್ದೇಶನ ಮಾಡಿದ್ದು, ಹಾಡುಗಳಿಗೆ ಅರ್ಜುನ್​ ಜನ್ಯ ಸಂಗೀತ ನೀಡಿದ್ದಾರೆ. ಚಿರು ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್​ ಮಾಡಿದ್ದಾರೆ. ಹಿರಿಯ ನಟ ಸುಂದರ್​ ರಾಜ್​ (Sundar Raj) ಅವರು ಈಗಾಗಲೇ ‘ರಾಜಮಾರ್ತಾಂಡ’ ಸಿನಿಮಾ ನೋಡಿದ್ದಾರೆ. ಅಳಿಯನ ಚಿತ್ರದ ಬಗ್ಗೆ ಅವರು ಮನಸಾರೆ ಮಾತನಾಡಿದ್ದಾರೆ. ‘ನಾನು ಸಿನಿಮಾ ನೋಡಿದ್ದೇನೆ. ತುಂಬ ಚೆನ್ನಾಗಿ ಮೂಡಿಬಂದಿದೆ. ಅಭಿಮಾನಿಗಳಲ್ಲಿ ನಾನು ಕೇಳಿಕೊಳ್ಳುವುದು ಇಷ್ಟೇ. ಈ ಚಿತ್ರವನ್ನು ಗೆಲ್ಲಿಸಿ. ಆ ಮೂಲಕ ಚಿರಂಜೀವಿ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ನನಗೆ ಇದೆ’ ಎಂದು ಸುಂದರ್ ರಾಜ್​ ಅವರು ಹೇಳಿದ್ದಾರೆ. ಈ ಸಿನಿಮಾದಲ್ಲಿ ಮೇಘನಾ ರಾಜ್​ ಪುತ್ರ ರಾಯನ್​ ರಾಜ್​ ಸರ್ಜಾ ಕೂಡ ಕಾಣಿಸಿಕೊಳ್ಳಲಿದ್ದಾನೆ ಎಂಬುದು ವಿಶೇಷ. ಈ ಎಲ್ಲ ಕಾರಣಗಳಿಂದಾಗಿ ‘ರಾಜಮಾರ್ತಾಂಡ’ ಸಿನಿಮಾ ಕೌತುಕ ಮೂಡಿಸಿದೆ.

ಇದನ್ನೂ ಓದಿ:

ಚಿರಂಜೀವಿ ಸರ್ಜಾ ಚಿತ್ರದಲ್ಲಿ ರಾಯನ್​ ರಾಜ್​ ಸರ್ಜಾ; ‘ರಾಜಮಾರ್ತಾಂಡ’ ರಿಲೀಸ್​ಗಾಗಿ ವಿಶೇಷ ಹೋಮ

ರಾಯನ್​ ಸರ್ಜಾಗೆ ಮಾತು ಕಲಿಸಿದ ಮೇಘನಾ ರಾಜ್​; ಇಲ್ಲಿದೆ ವಿಡಿಯೋ