ಯಾದಗಿರಿ: ನನ್ನ ಗಂಡನಿಗೆ MLA ಮತ್ತು ಮಗ 30 ಲಕ್ಷಕ್ಕೆ ಟಾರ್ಚರ್ ಕೊಟ್ಟವ್ರೆ ಎಂದು ಗಂಭೀರ ಆರೋಪ ಮಾಡಿದ ಮೃತ ಪಿಎಸ್​ಐ ಪತ್ನಿ

ಯಾದಗಿರಿ ಪಿಎಸ್​ಐ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮೃತ ಪಿಎಸ್ಐ ಪತ್ನಿ ಶ್ವೇತ, ‘ನನ್ನ ಪತಿಗೆ ಯಾದಗಿರಿ ಶಾಸಕ ಹಾಗೂ ಶಾಸಕರ ಪುತ್ರ ಕೊಟ್ಟ ದುಡ್ಡಿಗಾಗಿ ಕಿರುಕುಳ ನೀಡುತ್ತಿದ್ದರು. ಯಾದಗಿರಿ ನಗರ ಠಾಣೆಗೆ ಪೋಸ್ಟಿಂಗ್ ಮುಂದುವರೆಸಲು ಹೆಚ್ಚು ದುಡ್ಡು ಕೇಳಿದ್ದರು ಎಂದು ಶ್ವೇತ ಅವರು ಗಂಭೀರ ಆರೋಪ ಮಾಡಿದ್ದಾರೆ.

ಯಾದಗಿರಿ: ನನ್ನ ಗಂಡನಿಗೆ MLA ಮತ್ತು ಮಗ 30 ಲಕ್ಷಕ್ಕೆ ಟಾರ್ಚರ್ ಕೊಟ್ಟವ್ರೆ ಎಂದು ಗಂಭೀರ ಆರೋಪ ಮಾಡಿದ ಮೃತ ಪಿಎಸ್​ಐ ಪತ್ನಿ
|

Updated on:Aug 03, 2024 | 3:27 PM

ಯಾದಗಿರಿ, ಆ.03: ಯಾದಗಿರಿ ಸೈಬರ್ ಕ್ರೈಮ್ ಠಾಣೆಯ ಪಿಎಸ್ಐ(PSI)ಪರಶುರಾಮ (34) ಇಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಈ ಕುರಿತು ಮಾತನಾಡಿದ ಮೃತ ಪಿಎಸ್ಐ ಪತ್ನಿ ಶ್ವೇತ, ‘ನನ್ನ ಪತಿಗೆ ಯಾದಗಿರಿ ಶಾಸಕ ಹಾಗೂ ಶಾಸಕರ ಪುತ್ರ ಕೊಟ್ಟ ದುಡ್ಡಿಗಾಗಿ ಕಿರುಕುಳ ನೀಡುತ್ತಿದ್ದರು. ಯಾದಗಿರಿ ನಗರ ಠಾಣೆಗೆ ಪೋಸ್ಟಿಂಗ್ ಮುಂದುವರೆಸಲು ಹೆಚ್ಚು ದುಡ್ಡು ಕೇಳಿದ್ದರು. ದುಡ್ಡು ಕೊಡಲಿಲ್ಲ ಎಂದು ಪೋಸ್ಟಿಂಗ್ ಕೊಡಲಿಲ್ಲ. ಯಾರು‌ ದುಡ್ಡು ಜಾಸ್ತಿ ಕೊಟ್ಟಿದ್ದಾರೆ ಅದಕ್ಕೆ ಅವರಿಗೆ ಪೋಸ್ಟಿಂಗ್ ಕೊಟ್ಟಿದ್ದಾರೆ. ಬರಿ ದುಡ್ಡು ದುಡ್ಡು ಎಂದು ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹಾಗೂ ಪುತ್ರ ಪಂಪಣ್ಣಗೌಡ ಕಿರುಕುಳ ನೀಡುತ್ತಿದ್ದರು ಎಂದು ಶ್ವೇತ ಅವರು ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Sat, 3 August 24

Follow us