ಕಿರುಚಾಡಬೇಡಿ ಅನ್ನುತ್ತಾ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ ಟೀಮ್ ಇಂಡಿಯ ಕೋಚ್ ರಾಹುಲ್ ದ್ರಾವಿಡ್!

ಆಡುವ ದಿನಗಳಲ್ಲಿ ಟೀಮಿನ ‘ಮಿಸ್ಟರ್ ಡಿಪೆಂಡೇಬಲ್’ ಅನಿಸಿಕೊಂಡಿದ್ದ ದ್ರಾವಿಡ್ ಇಲ್ಲೂ ತನ್ನ ಡಿಪೆಂಡೇಬಿಲಿಟಿ ಪ್ರದರ್ಶಿಸಿ ಅಭಿಮಾನಿಗಳನ್ನು ಸಂತಸಪಡಿಸುತ್ತಾರೆ. ಅವರು ಹತ್ತಿರ ಬಂದಾಗ ಫ್ಯಾನ್ಸ್ ಖುಷಿ ಮತ್ತು ರೋಮಾಂಚನದಿಂದ ಚೀರಾಟವನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ‘ಡೋಂಟ್ ಶೌಟ್ ಡೋಂಟ್ ಶೌಟ್!’ ಅನ್ನುತ್ತಾ ಎಲ್ಲರಿಗೂ ಆಟೋಗ್ರಾಫ್ ನೀಡುತ್ತಾರೆ.

ಕಿರುಚಾಡಬೇಡಿ ಅನ್ನುತ್ತಾ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ ಟೀಮ್ ಇಂಡಿಯ ಕೋಚ್ ರಾಹುಲ್ ದ್ರಾವಿಡ್!
|

Updated on: Nov 11, 2023 | 7:05 PM

ಬೆಂಗಳೂರು: ಟೀಮ್ ಇಂಡಿಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಈಗಲೂ ತಾವು ಭಾರತೀಯ ತಂಡಕ್ಕೆ ಆಡುತ್ತಿದ್ದ ದಿನಗಳಲ್ಲಷ್ಟೇ ಜನಪ್ರಿಯರು. ಐಸಿಸಿ ವಿಶ್ವಕಪ್ 2023 (ICC CWC 2023) ಟೂರ್ನಿಯ ತನ್ನ ಕೊನೆಯ ರೌಂಡ್ ರಾಬಿನ್ ಪಂದ್ಯದಲ್ಲಿ ಈಗಾಗಲೇ ಫೈನಲ್ ತಲುಪಿರುವ ಭಾರತ ನಾಳೆ ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy stadium) ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಭಾರತದ ಆಟಗಾರರು ಇವತ್ತೆಲ್ಲ ಅಭ್ಯಾಸನಿರತರಾಗಿದ್ದರು. ಮೈದಾನದ ಹೊರಗಡೆ ರಾಹುಲ್ ದ್ರಾವಿಡ್ ಕಾಣಿಸಿದಾಗ ಆಟಗಾರರ ಒಂದು ಝಲಕ್ ಪಡೆಯಲು ಬಕಪಕ್ಷಿಗಳಂತೆ ನಿಂತಿದ್ದ ನಗರದ ಕ್ರಿಕೆಟ್ ಪ್ರೇಮಿಗಳು ‘ರಾಹುಲ್ ಸಾರ್ ರಾಹುಲ್ ಸರ್!’ ಅಂತ ಒಕ್ಕೊರಲಿನಿಂದ ಕೂಗುತ್ತಾರೆ. ಆಡುವ ದಿನಗಳಲ್ಲಿ ಟೀಮಿನ ‘ಮಿಸ್ಟರ್ ಡಿಪೆಂಡೇಬಲ್’ ಅನಿಸಿಕೊಂಡಿದ್ದ ದ್ರಾವಿಡ್ ಇಲ್ಲೂ ತನ್ನ ಡಿಪೆಂಡೇಬಿಲಿಟಿ ಪ್ರದರ್ಶಿಸಿ ಅಭಿಮಾನಿಗಳನ್ನು ಸಂತಸಪಡಿಸುತ್ತಾರೆ. ಅವರು ಹತ್ತಿರ ಬಂದಾಗ ಫ್ಯಾನ್ಸ್ ಖುಷಿ ಮತ್ತು ರೋಮಾಂಚನದಿಂದ ಚೀರಾಟವನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ‘ಡೋಂಟ್ ಶೌಟ್ ಡೋಂಟ್ ಶೌಟ್!’ ಅನ್ನುತ್ತಾ ಎಲ್ಲರಿಗೂ ಆಟೋಗ್ರಾಫ್ ನೀಡುವ ಜಂಟಲ್ ಮ್ಯಾನ್ ದ್ರಾವಿಡ್, ಒಬ್ಬ ಅಭಿಮಾನಿಗಾಗಿ ಸೆಲ್ಫೀಯನ್ನು ತಾವೇ ಕ್ಲಿಕ್ಕಿಸುತ್ತಾರೆ. ಕ್ರಿಕೆಟ್ ಪ್ರೇಮಿಗಳು ಫುಲ್ ಖುಶ್!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ