ಕಿರುಚಾಡಬೇಡಿ ಅನ್ನುತ್ತಾ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ ಟೀಮ್ ಇಂಡಿಯ ಕೋಚ್ ರಾಹುಲ್ ದ್ರಾವಿಡ್!

ಕಿರುಚಾಡಬೇಡಿ ಅನ್ನುತ್ತಾ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ ಟೀಮ್ ಇಂಡಿಯ ಕೋಚ್ ರಾಹುಲ್ ದ್ರಾವಿಡ್!
|

Updated on: Nov 11, 2023 | 7:05 PM

ಆಡುವ ದಿನಗಳಲ್ಲಿ ಟೀಮಿನ ‘ಮಿಸ್ಟರ್ ಡಿಪೆಂಡೇಬಲ್’ ಅನಿಸಿಕೊಂಡಿದ್ದ ದ್ರಾವಿಡ್ ಇಲ್ಲೂ ತನ್ನ ಡಿಪೆಂಡೇಬಿಲಿಟಿ ಪ್ರದರ್ಶಿಸಿ ಅಭಿಮಾನಿಗಳನ್ನು ಸಂತಸಪಡಿಸುತ್ತಾರೆ. ಅವರು ಹತ್ತಿರ ಬಂದಾಗ ಫ್ಯಾನ್ಸ್ ಖುಷಿ ಮತ್ತು ರೋಮಾಂಚನದಿಂದ ಚೀರಾಟವನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ‘ಡೋಂಟ್ ಶೌಟ್ ಡೋಂಟ್ ಶೌಟ್!’ ಅನ್ನುತ್ತಾ ಎಲ್ಲರಿಗೂ ಆಟೋಗ್ರಾಫ್ ನೀಡುತ್ತಾರೆ.

ಬೆಂಗಳೂರು: ಟೀಮ್ ಇಂಡಿಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಈಗಲೂ ತಾವು ಭಾರತೀಯ ತಂಡಕ್ಕೆ ಆಡುತ್ತಿದ್ದ ದಿನಗಳಲ್ಲಷ್ಟೇ ಜನಪ್ರಿಯರು. ಐಸಿಸಿ ವಿಶ್ವಕಪ್ 2023 (ICC CWC 2023) ಟೂರ್ನಿಯ ತನ್ನ ಕೊನೆಯ ರೌಂಡ್ ರಾಬಿನ್ ಪಂದ್ಯದಲ್ಲಿ ಈಗಾಗಲೇ ಫೈನಲ್ ತಲುಪಿರುವ ಭಾರತ ನಾಳೆ ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy stadium) ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಭಾರತದ ಆಟಗಾರರು ಇವತ್ತೆಲ್ಲ ಅಭ್ಯಾಸನಿರತರಾಗಿದ್ದರು. ಮೈದಾನದ ಹೊರಗಡೆ ರಾಹುಲ್ ದ್ರಾವಿಡ್ ಕಾಣಿಸಿದಾಗ ಆಟಗಾರರ ಒಂದು ಝಲಕ್ ಪಡೆಯಲು ಬಕಪಕ್ಷಿಗಳಂತೆ ನಿಂತಿದ್ದ ನಗರದ ಕ್ರಿಕೆಟ್ ಪ್ರೇಮಿಗಳು ‘ರಾಹುಲ್ ಸಾರ್ ರಾಹುಲ್ ಸರ್!’ ಅಂತ ಒಕ್ಕೊರಲಿನಿಂದ ಕೂಗುತ್ತಾರೆ. ಆಡುವ ದಿನಗಳಲ್ಲಿ ಟೀಮಿನ ‘ಮಿಸ್ಟರ್ ಡಿಪೆಂಡೇಬಲ್’ ಅನಿಸಿಕೊಂಡಿದ್ದ ದ್ರಾವಿಡ್ ಇಲ್ಲೂ ತನ್ನ ಡಿಪೆಂಡೇಬಿಲಿಟಿ ಪ್ರದರ್ಶಿಸಿ ಅಭಿಮಾನಿಗಳನ್ನು ಸಂತಸಪಡಿಸುತ್ತಾರೆ. ಅವರು ಹತ್ತಿರ ಬಂದಾಗ ಫ್ಯಾನ್ಸ್ ಖುಷಿ ಮತ್ತು ರೋಮಾಂಚನದಿಂದ ಚೀರಾಟವನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ‘ಡೋಂಟ್ ಶೌಟ್ ಡೋಂಟ್ ಶೌಟ್!’ ಅನ್ನುತ್ತಾ ಎಲ್ಲರಿಗೂ ಆಟೋಗ್ರಾಫ್ ನೀಡುವ ಜಂಟಲ್ ಮ್ಯಾನ್ ದ್ರಾವಿಡ್, ಒಬ್ಬ ಅಭಿಮಾನಿಗಾಗಿ ಸೆಲ್ಫೀಯನ್ನು ತಾವೇ ಕ್ಲಿಕ್ಕಿಸುತ್ತಾರೆ. ಕ್ರಿಕೆಟ್ ಪ್ರೇಮಿಗಳು ಫುಲ್ ಖುಶ್!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ