AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ ಅನುಪಸ್ಥಿತಿಯಲ್ಲಿ ನಡೆಯಿತು ಮದುವೆ: ಎಮೋಷನಲ್​ ಆದ​ ತರುಣ್​ ಸುಧೀರ್​

ದರ್ಶನ್​ ಅನುಪಸ್ಥಿತಿಯಲ್ಲಿ ನಡೆಯಿತು ಮದುವೆ: ಎಮೋಷನಲ್​ ಆದ​ ತರುಣ್​ ಸುಧೀರ್​

ಮದನ್​ ಕುಮಾರ್​
|

Updated on: Aug 11, 2024 | 4:29 PM

Share

ದರ್ಶನ್​ ಜೈಲಿನಲ್ಲಿ ಇರುವಾಗ ತಮ್ಮ ಮದುವೆ ನಡೆಯುತ್ತದೆ ಎಂದು ತರುಣ್​ ಸುಧೀರ್​ ಊಹಿಸಿರಲಿಲ್ಲ. ಆದರೆ ದರ್ಶನ್​ಗೆ ಜಾಮೀನು ಸಿಗದ ಕಾರಣ ಅವರ ಅನುಪಸ್ಥಿತಿಯಲ್ಲಿ ಮದುವೆ ನಡೆಯುವುದು ಅನಿವಾರ್ಯ ಆಯಿತು. ನಟಿ ಸೋನಲ್​ ಜೊತೆ ತರುಣ್​ ಅವರು ಹಸೆಮಣೆ ಏರಿದ್ದಾರೆ. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಭಾವುಕರಾದರು.

ಸಿನಿಮಾ ವಿಚಾರಕ್ಕೆ ಮಾತ್ರವಲ್ಲದೇ ವೈಯಕ್ತಿಕ ಜೀವನದಲ್ಲೂ ತರುಣ್​ ಸುಧೀರ್​ ಮತ್ತು ದರ್ಶನ್​ ನಡುವೆ ಉತ್ತಮ ಒಡನಾಟ ಇದೆ. ಕೊಲೆ ಆರೋಪದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತರುಣ್​ ಸುಧೀರ್​ ಮದುವೆ ಆಗಿದ್ದಾರೆ. ನಟಿ ಸೋನಲ್ ಮಾಂತೆರೋ ಜೊತೆ ತರುಣ್​ ವಿವಾಹ ನೆರವೇರಿದೆ. ಈ ವೇಳೆ ತರುಣ್​ ಸುಧೀರ್​ ಅವರು ದರ್ಶನ್​ ಬಗ್ಗೆ ಮಾತನಾಡುತ್ತಾ ಎಮೋಷನಲ್​ ಆಗಿದ್ದಾರೆ. ‘ಆಗಸ್ಟ್​ 11ರ ದಿನಾಂಕ ಮೊದಲೇ ನಿರ್ಧಾರ ಆಗಿತ್ತು. ಹಾಗಾಗಿ ನಾನು ಬಹಳ ಗೊಂದಲದಲ್ಲಿ ಇದ್ದೆ. ಮದುವೆಗೆ ನನ್ನನ್ನು ಹೆಚ್ಚು ಒತ್ತಾಯಿಸಿದ್ದು ನಮ್ಮ ತಾಯಿ. ಅವರನ್ನು ಬಿಟ್ಟರೆ ದರ್ಶನ್​. ಅವರು ಅಲ್ಲಿಂದಲೇ ಆಶೀರ್ವಾದ ಮಾಡುತ್ತಾರೆ. ಅವರು ಹೊರಬಂದ ಬಳಿಕ ನಾವು ಹೋಗಿ ಆಶೀರ್ವಾದ ಪಡೆಯುತ್ತೇವೆ. ಜೀವನದಲ್ಲಿ ಇದು ಮಹತ್ವದ ಹಂತ. ಇದನ್ನು ನಮ್ಮ ಆತ್ಮೀಯರು ನೋಡಬೇಕು. ಅವರು ಇಲ್ಲ ಎಂದಾಗ ಎಮೋಷನಲ್​ ಆಗುತ್ತೇವೆ’ ಎಂದು ತರುಣ್​ ಸುಧೀರ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More