ಮಳೆ ಅವಾಂತರದಿಂದ ಬೀದಿಗೆ ಬಿತ್ತು ವೃದ್ಧೆಯರ ಬದುಕು; ಮನಕಲಕುವಂತಿದೆ ಇವರ ನರಳಾಟ

ಮಳೆ ಅವಾಂತರದಿಂದ ಬೀದಿಗೆ ಬಿತ್ತು ವೃದ್ಧೆಯರ ಬದುಕು; ಮನಕಲಕುವಂತಿದೆ ಇವರ ನರಳಾಟ
|

Updated on:Jul 09, 2024 | 4:52 PM

ಮಳೆಗಾಲ ಶುರುವಾಗುತ್ತಿದ್ದಂತೆ ಕೆಲವರಿಗೆ ಎಲ್ಲಿಲ್ಲದ ಸಂತೋಷ, ಹೊಸ ರೂಪ ತಾಳುವ ಪ್ರಕೃತಿಯನ್ನು ಕಾಣಲು ಕಾರದಲ್ಲಿರುತ್ತಾರೆ. ಆದರೆ, ಕೆಲವರಿಗೆ ಹೇಗಪ್ಪಾ? ಬದುಕು ಸಾಗಿಸುವುದು ಎಂಬ ಚಿಂತೆ ಕಾಡಲು ಶುರುವಾಗುತ್ತದೆ. ಅದರಂತೆ ಇದೀಗ ಬೆಳಗಾವಿಯಲ್ಲಿ ಮಳೆ ಅವಾಂತರಕ್ಕೆ ವೃದ್ಧೆಯರ ಬದುಕು ಬೀದಿಗೆ ಬಿದ್ದಿದ್ದು, ತಾಡಪಲ್ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ.

ಬೆಳಗಾವಿ, ಜು.09: ಮಳೆ ಅವಾಂತರಕ್ಕೆ ವೃದ್ಧೆಯರ ಬದುಕು ಬೀದಿಗೆ ಬಿದ್ದಿದ್ದು, ವೃದ್ಧೆಯರ ನರಳಾಟ ಮನಕಲಕುವಂತಿದೆ. ಹೌದು,  ಕೆಲ ದಿನಗಳ ಹಿಂದೆ ಮಳೆಗೆ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ಹಿನ್ನಲೆ ಬೆಳಗಾವಿಯ ಕ್ಯಾಂಪ್​ನ ಮಹಿಳಾ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಪುಟ್ ಪಾತ್ ಮೇಲೆ ತಾಡಪಲ್ ಕಟ್ಟಿಕೊಂಡು ಅಕ್ಕ ಮಂಗಲಾ ಅಜ್ಗಾಂವಕರ್(75) ಮತ್ತು ಮನೋರಮಾ(70) ಎಂಬುವವರು ಜೀವನ ನಡೆಸುತ್ತಿದ್ದು, ಎಂತಹವರನ್ನಾದರೂ ಕರುಳು ಹಿಂಡುವಂತೆ ಮಾಡುತ್ತದೆ.

ಪುಟ್​ಪಾತ್​ನಲ್ಲಿ ವಾಸ

ಇನ್ನು ಇವರ ಸಾಮಾಗ್ರಿಗಳೆಲ್ಲವೂ ಬಿದ್ದ ಮನೆಯಲ್ಲಿಯೇ ಹಾನಿಯಾಗಿದೆ. ಹೆಚ್ಚು ಮಳೆಯಾದರೆ ಈ ವೃದ್ಧೆಯರು ನೀರಿನಲ್ಲಿ ನೆನೆದುಕೊಂಡೆ  ಜೀವನ ಸಾಗಿಸುತ್ತಿದ್ದಾರೆ. ನಡುಗುತ್ತಾ ಬೀದಿಯಲ್ಲಿಯೇ ವೃದ್ದೆಯರು ಕಾಲ ಕಳೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಅಂತಿದ್ದು, ಇತ್ತ ಮಹಾನಗರ ಪಾಲಿಕೆ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ. ಸ್ಕೂಲ್​ನಿಂದ ಬರುವ ಊಟವನ್ನ ಮಾಡಿ ಜೀವ ಉಳಿಸಿಕೊಂಡಿದ್ದಾರೆ. ಈ ಕುರಿತು ಅವರನ್ನು ನಮ್ಮ ಪ್ರತಿನಿಧಿ ಮಾತನಾಡಿಸಿದ್ದು, ವೃದ್ಧೆ ಮಂಗಲಾ, ‘ನಾವು ಹುಟ್ಟಿದ್ದು ಇಲ್ಲೇ, ಸಾಯುವುದು ಇಲ್ಲೇ ಅಂತಿದ್ದಾರೆ. ಈಗಲಾದರೂ ಇವರ ಸಹಾಯಕ್ಕೆ ಜಿಲ್ಲಾಡಳಿತ ಬರಲಿ ಎಂಬುದೇ ನಮ್ಮ ಆಶಯ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:41 pm, Tue, 9 July 24

Follow us
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ