ದರ್ಶನ್ ಫೋಟೋ ಹಿಡಿದು ಬಿಜೆಪಿ-ಜೆಡಿಎಸ್​ ಪಾದಯಾತ್ರೆಗೆ ಬಂದ; ಮುಂದೇನಾಯ್ತು ನೋಡಿ

|

Updated on: Aug 07, 2024 | 7:36 PM

ಮುಡಾ ಹಗರಣ ಖಂಡಿಸಿ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರಿನವರೆಗೆ​​ ಪಾದಯಾತ್ರೆ ಮಾಡುತ್ತಿದ್ದು, ಈ ವೇಳೆ ನಟ ದರ್ಶನ್ ಫೋಟೋವನ್ನು ಅಪರಿಚಿತ ವ್ಯಕ್ತಿಯೊಬ್ಬ ಪ್ರದರ್ಶನ ಮಾಡಿದ್ದಾನೆ. ಪಾದಯಾತ್ರೆ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರ ಫೋಟೋವನ್ನು ರಸ್ತೆ ಬದಿಯಲ್ಲಿ ನಿಂತು ಪ್ರದರ್ಶಿಸಿದ್ದಾನೆ.

ಮಂಡ್ಯ, ಆ.07: ಮುಡಾ ಹಗರಣ ಖಂಡಿಸಿ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರಿನವರೆಗೆ​​ ಪಾದಯಾತ್ರೆ ಮಾಡುತ್ತಿದ್ದು, ಈ ವೇಳೆ ನಟ ದರ್ಶನ್ ಫೋಟೋವನ್ನು ಅಪರಿಚಿತ ವ್ಯಕ್ತಿಯೊಬ್ಬ ಪ್ರದರ್ಶನ ಮಾಡಿದ್ದಾನೆ. ಪಾದಯಾತ್ರೆ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರ ಫೋಟೋವನ್ನು ರಸ್ತೆ ಬದಿಯಲ್ಲಿ ನಿಂತು ಪ್ರದರ್ಶಿಸಿದ್ದಾನೆ. ಇನ್ನು ದರ್ಶನ್ ಫೋಟೋ ಹಿಡಿದು ಪಾದಯಾತ್ರೆಗೆ ಸೇರಿಕೊಳ್ಳಲು ಈ ವ್ಯಕ್ತಿ ಮುಂದಾಗಿದ್ದಾನೆ. ಆಗ ಆತನನ್ನು ಪಾದಯಾತ್ರೆಯಿಂದ ಕಾರ್ಯಕರ್ತರು ಪಕ್ಕಕ್ಕೆ ಸರಿಸಿದ್ದಾರೆ. ಕೊಲೆ ಆರೋಪಿ ದರ್ಶನ್​ ಫೋಟೋ ಹಿಡಿದು ನುಗ್ಗಲು ಯತ್ನಿಸಿದ್ದ ವ್ಯಕ್ತಿಯನ್ನು ಕಾರ್ಯಕರ್ತರು ಪಕ್ಕಕ್ಕೆ ತಳ್ಳಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on