AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮರಥೋತ್ಸವ ನಡೆಯುವಾಗ ರಥದ ಗೋಪುರ ಉರುಳಿದ್ದು ಯಾಕೆ ಗೊತ್ತಾ?

ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮರಥೋತ್ಸವ ನಡೆಯುವಾಗ ರಥದ ಗೋಪುರ ಉರುಳಿದ್ದು ಯಾಕೆ ಗೊತ್ತಾ?

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 19, 2025 | 3:46 PM

ದೇವಸ್ಥಾನದ ಮುಂಭಾಗದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತಿದ್ದಾಗ ಪ್ರಧಾನ ಅರ್ಚಕರು ರಥದ ಗೋಪುರದಲ್ಲಿ ಕುಳಿತಿದ್ದರು. ಅವರು ಗೋಪುರದೊಂದಿಗೆ ನೆಲಕ್ಕೆ ಬಿದ್ದಿದ್ದು ನಿಜವಾದರೂ ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ರಥಧ ಮುಂಭಾಗದ ಚಕ್ರಗಳನ್ನು ಹಿಂಭಾಗದ ಚಕ್ರಗಳ ಜತೆ ಸಂಪರ್ಕ ಕಲ್ಪಿಸುವ ಌಕ್ಸೆಲ್ ಕಟ್ಟಾಗಿದ್ದರಿಂದ ಅವಘಡ ಸಂಭವಿಸಿದೆ. ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ ಅಂತಲೂ ಹೇಳುತ್ತಾರೆ.

ಮಂಗಳೂರು, ಏಪ್ರಿಲ್ 19: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲ್ಲೂಕಿನ ಬಪ್ಪನಾಡುನಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮರಥೋತ್ಸವ ನಡೆಯುತ್ತಿದ್ದಾಗ ಅವಘಡವೊಂದು ಸಂಭವಿಸಿದೆ. ನಮ್ಮ ಮಂಗಳೂರು ವರದಿಗಾರ ಸ್ಥಳಕ್ಕೆ ಭೇಟಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಮೊಬೈಲ್ ಸೆರೆಹಿಡಿಯಲಾಗಿರುವ ವಿಡಿಯೋನಲ್ಲಿ ರಥದ ಗೋಪುರ (tower of chariot) ಭಾಗ ಉರುಳಿ ಬೀಳುವುದನ್ನು ನೋಡಬಹುದು. ಅದು ಬೀಳುವ ಭಾಗದಲ್ಲಿ ನೂರಾರು ಭಕ್ತಾದಿಗಳಿದ್ದರು, ಅದರೆ ಪ್ರಾಣಾಪಾಯ ಸಂಭವಿಸಿಲ್ಲ. ಉರುಳಿಬಿದ್ದ ಗೋಪುರ ಅಡಿಯಲ್ಲಿ ಯಾರಾದರೂ ಸಿಲುಕಿಕೊಂಡಿದ್ದರೆ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇತ್ತು

ಇದನ್ನೂ ಓದಿ:  ಹೊಸಕೋಟೆ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿ: ಬಿಜೆಪಿ ಹೇಳಿಕೆಗೆ ಕಾಂಗ್ರೆಸ್​ ತಿರುಗೇಟು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ