BBK 10: ‘ವರ್ತೂರು ಸಂತೋಷ್ ಮಾತನಾಡಿದರೂ ಅತ್ತಂಗೆ ಕಾಣುತ್ತೆ’: ನೊಂದವರ ಬಗ್ಗೆ ತುಕಾಲಿ ಮಾತು
ಸುದೀಪ್ ಕೇಳಿದ ಕೆಲವು ಪ್ರಶ್ನೆಗಳಿಗೆ ತುಕಾಲಿ ಸಂತೋಷ್ ಉತ್ತರ ನೀಡಿದ್ದಾರೆ. ನೊಂದವರ ಸಂಘದಲ್ಲಿ ಇರುವವರ ಪೈಕಿ ಯಾರಿಗೆ ಯಾವ ಸ್ಥಾನ ಎಂದು ಕೇಳಿದ್ದಕ್ಕೆ ತುಕಾಲಿ ಸಂತೋಷ್ ಈ ರೀತಿ ಉತ್ತರ ನೀಡಿದ್ದಾರೆ. ಅವರ ತಮಾಷೆಯ ಮಾತುಗಳನ್ನು ಕೇಳಿ ಸುದೀಪ್ ಅವರು ಜೋರಾಗಿ ನಕ್ಕಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ಹಾಸ್ಯ ನಟ ತುಕಾಲಿ ಸಂತೋಷ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ರಿಯಾಲಿಟಿ ಶೋನಲ್ಲಿ ನಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿ ವೀಕೆಂಡ್ನಲ್ಲೂ ಅವರು ಮನರಂಜನೆ ನೀಡುತ್ತಾರೆ. ಈ ಭಾನುವಾರ (ನವೆಂಬರ್ 26) ಕಿಚ್ಚ ಸುದೀಪ್ (Kichcha Sudeep) ಕೇಳಿದ ಕೆಲವು ಪ್ರಶ್ನೆಗಳಿಗೆ ತುಕಾಲಿ ಸಂತೋಷ್ ಉತ್ತರ ನೀಡಿದ್ದಾರೆ. ನೊಂದವರ ಸಂಘದಲ್ಲಿ ಇರುವವರ ಪೈಕಿ ಯಾರಿಗೆ ಯಾವ ಸ್ಥಾನ ಎಂದು ಕೇಳಿದ್ದಕ್ಕೆ ತುಕಾಲಿ ಸಂತೋಷ್ (Tukali Santhosh) ಈ ರೀತಿ ಉತ್ತರ ನೀಡಿದ್ದಾರೆ. ‘ನೊಂದವರ ಸಂಘಕ್ಕೆ ಕಾರ್ತಿಕ್ ಅಧ್ಯಕ್ಷ. ಯಾಕೆಂದರೆ, ನಮ್ಮ ಗುಂಪಲ್ಲಿ ಜಾಸ್ತಿ ನೊಂದಿರುವವನು ಅವನೇ. ವರ್ತೂರು ಸಂತೋಷ್ ಉಪಾಧ್ಯಕ್ಷರು. ಅವರು ಮಾತನಾಡಿದರೂ ಅತ್ತಂತೆ ಕಾಣುತ್ತಾ ಇರುತ್ತೆ. ಪ್ರತಾಪ್ ಅವರು ಕಾರ್ಯದರ್ಶಿ. ತಾವು ಯಾವ ಗುಂಪಿಗೂ ಸೇರಲ್ಲ ಅಂತ ಹೋಗಿದ್ದರು. ಆ ಕಡೆ ಹೋದಮೇಲೆ ಅಪಾರವಾದ ನೋವು ಅನುಭವಿಸಿಕೊಂಡು ಬಂದಿದ್ದಾರೆ’ ಎಂದು ತುಕಾಲಿ ಸಂತೋಷ್ ಹೇಳಿದ್ದು ಕೇಳಿ ಸುದೀಪ್ ನಕ್ಕಿದ್ದಾರೆ. ನವೆಂಬರ್ 26ರ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಈ ಸಂಚಿಕೆ ಪ್ರಸಾರ ಆಗಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆಯೂ ಉಚಿತವಾಗಿ ಲೈವ್ ವೀಕ್ಷಿಸಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!

