ದ್ವಿಚಕ್ರವಾಹನ ಕದಿಯುವುದು ವೃತ್ತಿಯಾಗಿಸಿಕೊಂಡಿದ್ದ ಬೈಕ್ ಕಳ್ಳನ ಬಂಧಿಸಿದ ತುಮಕೂರು ಪೊಲೀಸ್

Updated on: May 16, 2025 | 11:24 AM

ಆನಂದ್ ಒಬ್ಬ ಹ್ಯಾಬಿಚುಯಲ್ ಅಫೆಂಡರ್ ಅನ್ನೋದು ಗೊತ್ತಾಗಿದೆ. ತುಮಕೂರುಗೆ ಬರುವ ಮೊದಲು ಅವನು ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಬೆಂಗಳೂರಲ್ಲೂ ಬೈಕ್​ಗಳನ್ನು ಕದ್ದಿದ್ದ ಮತ್ತು ಮೂರು ಬಾರಿ ಸೆರೆವಾಸ ಅನುಭವಿಸಿದ್ದ. ಬೈಕ್ ಗಳನ್ನು ಕದಿಯುವಾಗ ಅವನು ತುಂಬಾ ಚೂಸಿಯಾಗಿರುತ್ತಿದ್ದ, ಕೇವಲ ಒಳ್ಳೆಯ ಕಂಡೀಷನ್​ನಲ್ಲಿರುವ ವಾಹನಗಳನ್ನು ಮಾತ್ರ ಕದಿಯುತ್ತಿದ್ದ

ತುಮಕೂರು, ಮೇ 16: ನಗರದ ನ್ಯೂ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ಒಬ್ಬ ಕುಖ್ಯಾತ (notorious) ಬೈಕ್ ಕಳ್ಳನನ್ನು ಬಂಧಿಸಿ ಅವನಿಂದ ಸುಮಾರು ₹11,23,000 ಮೌಲ್ಯಯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವಿಕೆ ಹೇಳಿದರು. ಬಂಧಿತ ಕಳ್ಳ ಆಂಧ್ರ ಪ್ರದೇಶ ಮೂಲದವನಾಗಿದ್ದು, 32-ವರ್ಷ ವಯಸ್ಸಿನ ಇವನ ಹೆಸರು ಚಿತ್ತಪ್ಪಗಾರಿ ಆನಂದ್ ಆಗಿದೆ. ರೈಲು ನಿಲ್ದಾಣದ ಮುಂದೆ ಪಾರ್ಕ್ ಮಾಡಿರುತ್ತಿದ್ದ ಸ್ಕೂಟರ್ ಮತ್ತು ಬೈಕ್​ಗಳನ್ನು ಕದಿಯುತ್ತಿದ್ದ ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಕಳೆದ 6 ತಿಂಗಳು ಅವಧಿಯಲ್ಲಿ ಆನಂದ್ 30 ದ್ವಿಚಕ್ರವಾಹನಗಳನ್ನು ಕದ್ದಿದ್ದಾನೆ.

ಇದನ್ನೂ ಓದಿ:  ಬ್ಯಾಂಕ್​ನಿಂದ ಬೈಕ್​ನಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುವಾಗ ದುಡ್ಡು ಎಗರಿಸಿದ ಕಳ್ಳ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: May 16, 2025 10:48 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More