AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಬಸ್​​ಗಳಿಗೆ ಕ್ಲಚ್ ಇಲ್ಲ, ಬ್ರೇಕ್ ಇಲ್ಲ, ಕಂಡೀಷನ್ ಇಲ್ಲ: ಪ್ರಯಾಣಿಕರ ಜೀವಕ್ಕೆ ದೇವರೇ ಗತಿ

ಗದಗ: ಬಸ್​​ಗಳಿಗೆ ಕ್ಲಚ್ ಇಲ್ಲ, ಬ್ರೇಕ್ ಇಲ್ಲ, ಕಂಡೀಷನ್ ಇಲ್ಲ: ಪ್ರಯಾಣಿಕರ ಜೀವಕ್ಕೆ ದೇವರೇ ಗತಿ

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Jan 08, 2026 | 12:44 PM

Share

ಟಿವಿ9 ನಿರಂತರವಾಗಿ ನಡೆಸುತ್ತಿರುವ ಡಕೋಟಾ ಬಸ್ ರಿಯಾಲಿಟಿ ಚೆಕ್ ಭಾಗವಾಗಿ, ಗದಗ ಜಿಲ್ಲೆಯಲ್ಲಿ ಸರ್ಕಾರಿ ಬಸ್​​ಗಳ ಸ್ಥಿತಿಗತಿ ದಯನೀಯವಾಗಿದೆ. ಗದಗ ನಗರದ ಬಸ್ ನಿಲ್ದಾಣದಲ್ಲಿ ಪರೀಕ್ಷಿಸಿದ ಬಸ್​​ಗಳ ಶಾಕ್ ಅಬ್ಸಾರ್ಬರ್‌ಗಳು ಕಿತ್ತುಕೊಂಡಿದ್ದು, ಸಪೋರ್ಟಿವ್ ಭಾಗಗಳು ಸಂಪೂರ್ಣ ಹೊರಬಂದಿವೆ. ಹಿಂಭಾಗದ ಶಾಕ್ ಅಬ್ಸಾರ್ಬರ್‌ಗಳೂ ಇದೇ ಸ್ಥಿತಿಯಲ್ಲಿವೆ. ಸಾರಿಗೆ ಇಲಾಖೆಯು ಇವುಗಳ ದುರಸ್ತಿ ಬಗ್ಗೆ ಗಮನಹರಿಸದಿರುವುದು ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡಿದಂತಾಗಿದೆ. ಗದಗ ವಿಭಾಗದಲ್ಲಿ ಬಹುತೇಕ ಬಸ್​​ಗಳು ಇದೇ ರೀತಿಯ ಡಕೋಟಾ ಸ್ಥಿತಿಯಲ್ಲಿವೆ. ಸೀಟ್‌ಗಳು ಕಿತ್ತುಹೋಗಿದ್ದು, ಚಾಲಕರ ಪ್ರಕಾರ ಹಲವು ಬಸ್​​ಗಳಿಗೆ ಕ್ಲಚ್, ಬ್ರೇಕ್, ಕಂಡೀಷನ್ ಇಲ್ಲ. ಜನರು ತಮ್ಮ ಜೀವ ಕೈಯಲ್ಲಿ ಹಿಡಿದು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಗದಗ , ಜ.8: ಟಿವಿ9 ಕನ್ನಡ ಮಾಡುತ್ತಿರುವ ಡಕೋಟಾ ಬಸ್ ರಿಯಾಲಿಟಿ ಚೆಕ್ ಅಭಿಯಾನದಲ್ಲಿ ಇದೀಗ ಗದಗ ಜಿಲ್ಲೆಯ ಬಸ್​​ಗಳ ದುಸ್ಥಿತಿ ಬಯಲಾಗಿದೆ. ಗದಗ ನಗರದ ಬಸ್ ನಿಲ್ದಾಣದಲ್ಲಿ ಗದಗ-ಹುಲಕೋಟಿ ಮತ್ತು ಹೊಸಳ್ಳಿಗೆ ಸಂಚರಿಸುವ ಬಸ್ಸುಗಳ ಸ್ಥಿತಿಗತಿ ಆತಂಕಕಾರಿಯಾಗಿದೆ. ಬಸ್​​ಗಳ ಪ್ರಮುಖ ಭಾಗಗಳಾದ ಶಾಕ್ ಅಬ್ಸಾರ್ಬರ್‌ಗಳು ಸಂಪೂರ್ಣವಾಗಿ ಕಿತ್ತು ಹೋಗಿದೆ. ಬಲೂನ್ ರೀತಿಯ ಶಾಕ್ ಅಬ್ಸಾರ್ಬರ್​​ಗಳಿಗೆ ಸಪೋರ್ಟ್ ಆಗಿ ಇರಬೇಕಾದ ಭಾಗಗಳು ಹೊರಬಂದಿವೆ. ಹಿಂಭಾಗದ ಶಾಕ್ ಅಬ್ಸಾರ್ಬರ್‌ಗಳೂ ಕೂಡ ಇದೇ ಸ್ಥಿತಿಯಲ್ಲಿದ್ದು, ಅವುಗಳಿಗೆ ಇರಬೇಕಾದ ಬೆಂಬಲ ಕಳೆದುಹೋಗಿದೆ. ಇಂತಹ ದುಸ್ಥಿತಿಯಲ್ಲೂ ಸಾರಿಗೆ ಇಲಾಖೆಯು ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ ಎಂದು ವರದಿಯಾಗಿದೆ. ಗದಗ ವಿಭಾಗದಲ್ಲಿ ಸಂಚರಿಸುವ ಬಹುತೇಕ ಬಸ್​​ಗಳು ಹಳೆಯದಾಗಿ, ಸಂಪೂರ್ಣವಾಗಿ ಹಾಳಾಗಿವೆ. ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಬಸ್​​ಗಳು ನಿತ್ಯವೂ ಸಾವಿರಾರು ಜನರನ್ನು ಹೊತ್ತೊಯ್ಯುತ್ತವೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಹಳ್ಳಿಗಳಿಂದ ಗದಗಕ್ಕೆ ಮತ್ತು ಗದಗದಿಂದ ವಿವಿಧ ಹಳ್ಳಿಗಳಿಗೆ ಪ್ರಯಾಣಿಸುವವರು ಈ ಅಪಾಯಕಾರಿ ಬಸ್​​ಗಳನ್ನೇ ಅವಲಂಬಿಸಿದ್ದಾರೆ. ಬಸ್​​ಗಳ ಒಳಭಾಗದಲ್ಲಿ ಸೀಟ್‌ಗಳು ಕಿತ್ತುಹೋಗಿದ್ದು, ಕನಿಷ್ಠ ಸೌಜನ್ಯದಿಂದಲೂ ಅವುಗಳನ್ನು ದುರಸ್ತಿ ಮಾಡಿಸುವ ಪ್ರಯತ್ನ ನಡೆದಿಲ್ಲ. ಈ ಬಸ್​​ಗಳ ಚಾಲಕರು ಮತ್ತು ಅಧಿಕಾರಿಗಳು ಕೂಡ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಬಸ್​​ಗಳಿಗೆ ಕ್ಲಚ್ ಇಲ್ಲ, ಬ್ರೇಕ್ ಇಲ್ಲ, ಕಂಡೀಷನ್ ಇಲ್ಲ. ದೇವರೇ ಗತಿ ಎಂದು ನಾವು ಇವುಗಳನ್ನು ಓಡಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇಂತಹ ಮಾತುಗಳು ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಮತ್ತು ನಿರ್ವಹಣಾ ಲೋಪಗಳನ್ನು ಎತ್ತಿ ತೋರಿಸುತ್ತವೆ. ಬಸ್​​ಗಳ ಹಿಂದಿನ ಚಕ್ರಗಳ ಭಾಗದಲ್ಲಿರುವ ಸಪೋರ್ಟಿವ್ ಶಾಕ್ ಅಬ್ಸಾರ್ಬರ್‌ಗಳೂ ಕಿತ್ತುಹೋಗಿದ್ದು, ಇಲಾಖೆಯ ನಿರ್ಲಕ್ಷ್ಯ ಅಥವಾ ಹಣಕಾಸಿನ ಕೊರತೆ ಕುರಿತು ಹತ್ತಾರು ಪ್ರಶ್ನೆಗಳು ಉದ್ಭವಿಸಿವೆ. ಗದಗ ಜಿಲ್ಲೆಯಾದ್ಯಂತ ಸಂಚರಿಸುವ ಈ ಡಕೋಟಾ ಬಸ್​​ಗಳಿಂದ ಜನರು ಬೇಸತ್ತು ಹೋಗಿದ್ದಾರೆ. ಇಂತಹ ಬಸ್​​ಗಳಲ್ಲಿ ಪ್ರಯಾಣಿಸುವುದು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sanjeev Pandre
Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More