Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋನ್ ಸಂಭಾಷಣೆ ವಿವಾದದಿಂದ ಅಧೀರರಾಗದ ಯತೀಂದ್ರ ಸಿದ್ದರಾಮಯ್ಯ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಮುಂದುವರಿಸಿದ್ದಾರೆ!

ಫೋನ್ ಸಂಭಾಷಣೆ ವಿವಾದದಿಂದ ಅಧೀರರಾಗದ ಯತೀಂದ್ರ ಸಿದ್ದರಾಮಯ್ಯ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಮುಂದುವರಿಸಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 22, 2023 | 1:14 PM

ಒಬ್ಬ ವ್ಯಕ್ತಿ ಪ್ರಾಯಶಃ ಗ್ರಾಮ ಪಂಚಾಯಿತಿ ಸದಸ್ಯ ಅಥವಾ ಆಧ್ಯಕ್ಷನಿರಬಹುದು; ತನ್ನ ಪಾಡಿಗೆ ತಾನು ಮೈಕ್ ಹಿಡಿದು ಮಾತಾಡುತ್ತಿದ್ದರೆ ಯತೀಂದ್ರ ಜನರ ತಮ್ಮಲ್ಲಿಗೆ ತೆಗೆದುಕೊಂಡು ಬರುವ ಅರ್ಜಿ, ಮನವಿ ಪತ್ರಗಳ ಮೇಲೆ ಸಹಿ ಹಾಕುತ್ತಿದ್ದಾರೆ. ಕ್ಷೇತ್ರದ ಕುಂದು ಕೊರತೆಗಳನ್ನು ವಿಚಾರಿಸಲು ಮಗನಿಗೆ ಹೇಳಿದ್ದೇನೆ ಅಂತ ಸಿದ್ದರಾಮಯ್ಯ ಹೇಳಿರುವುದರಿಂದ ಅರ್ಜಿಗಳ ಮೇಲೆ ಅವರು ಮಾಡುವ ಸಹಿಗಳಿಗೆ ತುಂಬಾನೇ ಮಹತ್ವ ಇರುವಂತಿದೆ.

ಮೈಸೂರು: ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜೊತೆ ಅವರ ಮಗ ಮತ್ತು ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಫೋನಲ್ಲಿ ಮಾತಾಡಿದ್ದು ವಿವಾದದ ರೂಪ ತಳೆದು ವಿರೋಧ ಪಕ್ಷದ ನಾಯಕರು (leaders of opposition) ಆಡಳಿತಲ್ಲಿ ಪುತ್ರನ ಹಸ್ತಕ್ಷೇಪ ಅಂತ ಆರೋಪಗಳನ್ನು ಮಾಡಿದಾಗ್ಯೂ ಯತೀಂದ್ರ ಧೃತಿಗೆಟ್ಟಂತಿಲ್ಲ. ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಮಾಡುವುದನ್ನು ಅವರು ಮುಂದುವರಿಸಿದ್ದಾರೆ. ಜಿಲ್ಲೆಯ ಗ್ರಾಮವೊಂದರಲ್ಲಿ ಅವರು ಜನಸಂಪರ್ಕ ಸಬೆ ನಡೆಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಒಬ್ಬ ವ್ಯಕ್ತಿ ಪ್ರಾಯಶಃ ಗ್ರಾಮ ಪಂಚಾಯಿತಿ ಸದಸ್ಯ ಅಥವಾ ಆಧ್ಯಕ್ಷನಿರಬಹುದು; ತನ್ನ ಪಾಡಿಗೆ ತಾನು ಮೈಕ್ ಹಿಡಿದು ಮಾತಾಡುತ್ತಿದ್ದರೆ ಯತೀಂದ್ರ ಜನರ ತಮ್ಮಲ್ಲಿಗೆ ತೆಗೆದುಕೊಂಡು ಬರುವ ಅರ್ಜಿ, ಮನವಿ ಪತ್ರಗಳ ಮೇಲೆ ಸಹಿ ಹಾಕುತ್ತಿದ್ದಾರೆ. ಕ್ಷೇತ್ರದ ಕುಂದು ಕೊರತೆಗಳನ್ನು ವಿಚಾರಿಸಲು ಮಗನಿಗೆ ಹೇಳಿದ್ದೇನೆ ಅಂತ ಸಿದ್ದರಾಮಯ್ಯ ಹೇಳಿರುವುದರಿಂದ ಅರ್ಜಿಗಳ ಮೇಲೆ ಅವರು ಮಾಡುವ ಸಹಿಗಳಿಗೆ ತುಂಬಾನೇ ಮಹತ್ವ ಇರುವಂತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ