AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಇಂಧನ ಮಿತವ್ಯಯದ ಕರೆ: ಬೆಂಗಾವಲು ವಾಹನ ತ್ಯಜಿಸಿದ ಕೇಂದ್ರ ಸಚಿವ ವಿ. ಸೋಮಣ್ಣ

ಪ್ರಧಾನಿ ಮೋದಿ ಇಂಧನ ಮಿತವ್ಯಯದ ಕರೆ: ಬೆಂಗಾವಲು ವಾಹನ ತ್ಯಜಿಸಿದ ಕೇಂದ್ರ ಸಚಿವ ವಿ. ಸೋಮಣ್ಣ

Jagadisha B
| Edited By: |

Updated on:May 15, 2026 | 2:21 PM

Share

ಕೇಂದ್ರ ಸಚಿವ ವಿ. ಸೋಮಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಮಿತವ್ಯಯದ ಕರೆಯನ್ನು ಅನುಸರಿಸಿ ಭದ್ರತಾ ಬೆಂಗಾವಲು ವಾಹನಗಳನ್ನು ತ್ಯಜಿಸಿದ್ದಾರೆ. ತುಮಕೂರಿನಲ್ಲಿ ದಿಶಾ ಸಭೆಗೆ ಕೇವಲ ಸ್ಥಳೀಯ ಬೆಂಗಾವಲಿನೊಂದಿಗೆ ಆಗಮಿಸಿದ ಸಚಿವರು, ಆರ್.ಪಿ.ಎಫ್. ಸೇರಿದಂತೆ ಇತರೆ ಭದ್ರತಾ ವಾಹನಗಳನ್ನು ಬಳಸಲಿಲ್ಲ. ಇದು ದೇಶಕ್ಕೆ ಉತ್ತಮ ಸಂದೇಶ ಮತ್ತು ಅಭಿವೃದ್ಧಿಯ ಸಂಕೇತ ಎಂದರು.

ತುಮಕೂರು, ಮೇ 15: ಕೇಂದ್ರ ಸಚಿವ ವಿ. ಸೋಮಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಮಿತವ್ಯಯದ ಕರೆಯನ್ನು ಪಾಲಿಸಿ ತಮ್ಮ ಬೆಂಗಾವಲು ವಾಹನಗಳನ್ನು ಕಡಿತಗೊಳಿಸಿದ್ದಾರೆ. ತುಮಕೂರಿನಲ್ಲಿ ನಡೆದ ದಿಶಾ ಸಭೆಗೆ ಆಗಮಿಸಿದ ಸೋಮಣ್ಣ ಅವರು, ಆರ್.ಪಿ.ಎಫ್. ಸೇರಿದಂತೆ ಯಾವುದೇ ಭದ್ರತಾ ವಾಹನಗಳನ್ನು ಬಳಸದೆ ಕೇವಲ ಸ್ಥಳೀಯ ಬೆಂಗಾವಲಿನೊಂದಿಗೆ ಬಂದಿದ್ದಾರೆ. ಈ ಕುರಿತು ಮಾತನಾಡಿದ ಸಚಿವರು, ಪ್ರಧಾನಮಂತ್ರಿಗಳ ಕರೆ ಕೇವಲ ಇಂಧನ ಉಳಿತಾಯಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ದೇಶಕ್ಕೆ ಉತ್ತಮ ಸಂದೇಶ ರವಾನಿಸುವುದು ಹಾಗೂ ದೇಶದ ಅಭಿವೃದ್ಧಿಯ ಸಂಕೇತ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: May 15, 2026 02:20 PM
Follow Us
Jagadisha B
Jagadisha B

ಜಗದೀಶ್​ ಬಸವರಾಜು ಟಿವಿ9 ಕನ್ನಡದ ವರದಿಗಾರರಲ್ಲಿ ಒಬ್ಬರು. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ.

Read More