ಕಿಚ್ಚ ಸುದೀಪ್ ಅವರಿಗೆ ವಿಶೇಷ ಉಡುಗೊರೆ ಕೊಡಲಿದ್ದಾರೆ ವರ್ತೂರು ಸಂತೋಷ್

Varthur Santhosh: ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಬಿಗ್​ಬಾಸ್ ಮನೆಯಿಂದ ಹೊರ ಬಂದ ಬಳಿಕ ಒಳ್ಳೆಯ ಹವಾ ಎಬ್ಬಿಸಿದ್ದಾರೆ. ಕಿಚ್ಚ ಸುದೀಪ್ ಬಗ್ಗೆ ಮಾತನಾಡಿದ ಸಂತೋಷ್ ಅವರು ಅಣ್ಣನಿಗೆ ಕೊಡಲು ಬಯಸಿರುವ ಉಡುಗೊರೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರಿಗೆ ವಿಶೇಷ ಉಡುಗೊರೆ ಕೊಡಲಿದ್ದಾರೆ ವರ್ತೂರು ಸಂತೋಷ್
|

Updated on: Feb 08, 2024 | 9:56 PM

ವರ್ತೂರು ಸಂತೋಷ್ (Varthur Santhosh), ಬಿಗ್​ಬಾಸ್ ಗೆಲ್ಲದಿದ್ದರೂ, ಬಿಗ್​ಬಾಸ್ ವಿನ್ನರ್​ಗಿಂತಲೂ ಹೆಚ್ಚು ಹವಾ ಎಬ್ಬಿಸಿದ್ದಾರೆ. ಬಿಗ್​ಬಾಸ್ ಮನೆಯಿಂದ ಹೊರಬಂದ ಕೂಡಲೇ ಅದ್ಧೂರಿ ಕಾರ್ಯಕ್ರಮ ಮಾಡಿ ಸ್ಪರ್ಧಿಗಳನ್ನೆಲ್ಲ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ವರ್ತೂರು ಸಂತು, ಹೊಸಕೋಟೆ ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ಅದ್ಧೂರಿಯಾ ಮೆರವಣಿಗೆಯನ್ನೂ ಮಾಡಿದ್ದಾರೆ. ಇಂದು (ಫೆಬ್ರವರಿ 08) ಸುದ್ದಿಗೋಷ್ಠಿ ನಡೆಸಿ ಮುಂದೆ ತಾವು ಆಯೋಜಿಸಲಿರುವ ಹಳ್ಳಿಕಾರ್ ರೇಸ್​ ಬಗ್ಗೆ ಕೆಲ ಮಾಹಿತಿಯನ್ನು ಹಂಚಿಕೊಂಡರು. ಈ ವೇಳೆ ಟಿವಿ9 ಜೊತೆ ಮಾತನಾಡಿದ ವರ್ತೂರು ಸಂತೋಷ್, ರೇಸ್​ಗೆ ಸುದೀಪ್ ಅವರನ್ನು ಅತಿಥಿಯಾಗಿ ಕರೆಯಲಿದ್ದೀನಿ. ಮಾತ್ರವಲ್ಲ ಅವರಿಗೆ ಹಳ್ಳಿಕಾರ್ ಎತ್ತುಗಳನ್ನು ಉಡುಗೊರೆಯಾಗಿ ಕೊಡುವ ಆಸೆಯಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us