Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೈಕ್​ನಲ್ಲಿ ತೆರಳುತ್ತಿದ್ದ ಹಾಲು ವ್ಯಾಪಾರಿಗೆ ಡಿಕ್ಕಿ ಹೊಡೆದ ಚಿರತೆ

Video: ಬೈಕ್​ನಲ್ಲಿ ತೆರಳುತ್ತಿದ್ದ ಹಾಲು ವ್ಯಾಪಾರಿಗೆ ಡಿಕ್ಕಿ ಹೊಡೆದ ಚಿರತೆ

ನಯನಾ ರಾಜೀವ್
|

Updated on: Feb 11, 2025 | 12:25 PM

ಒಂದು ಕಡೆ ಚಿರತೆ ರಸ್ತೆ ದಾಟುತ್ತಿತ್ತು, ಇನ್ನೊಂದು ಕಡೆ ಹಾಲು ವ್ಯಾಪಾರಿ ಬೈಕ್​ನಲ್ಲಿ ಬರುತ್ತಿದ್ದರು, ಈ ವೇಳೆ ಚಿರತೆ ಬೈಕ್​ಗೆ ಡಿಕ್ಕಿ ಹೊಡೆದಿರುವ ಘಟನೆ ಉದಯಪುರದಲ್ಲಿ ನಡೆದಿದೆ. ರಾತ್ರಿ 8 ಗಂಟೆ ಸುಮಾರಿಗೆ ಶಿಲ್ಪಗ್ರಾಮ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಹಾಲು ವ್ಯಾಪಾರಿ, ಚಿರತೆ ಇಬ್ಬರೂ ಗಾಯಗೊಂಡಿದ್ದಾರೆ. ಕೆಲ ಸೆಕೆಂಡುಗಳ ಕಾಲ ಚಿರತೆ ರಸ್ತೆಯಲ್ಲೇ ಬಿದ್ದುಕೊಂಡಿತ್ತು ನಿಧಾನವಾಗಿ ಕುಂಟುತ್ತಾ ರಸ್ತೆ ದಾಟಿತು.

ಒಂದು ಕಡೆ ಚಿರತೆ ರಸ್ತೆ ದಾಟುತ್ತಿತ್ತು, ಇನ್ನೊಂದು ಕಡೆ ಹಾಲು ವ್ಯಾಪಾರಿ ಬೈಕ್​ನಲ್ಲಿ ಬರುತ್ತಿದ್ದರು, ಈ ವೇಳೆ ಚಿರತೆ ಬೈಕ್​ಗೆ ಡಿಕ್ಕಿ ಹೊಡೆದಿರುವ ಘಟನೆ ಉದಯಪುರದಲ್ಲಿ ನಡೆದಿದೆ. ರಾತ್ರಿ 8 ಗಂಟೆ ಸುಮಾರಿಗೆ ಶಿಲ್ಪಗ್ರಾಮ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಹಾಲು ವ್ಯಾಪಾರಿ, ಚಿರತೆ ಇಬ್ಬರೂ ಗಾಯಗೊಂಡಿದ್ದಾರೆ. ಕೆಲ ಸೆಕೆಂಡುಗಳ ಕಾಲ ಚಿರತೆ ರಸ್ತೆಯಲ್ಲೇ ಬಿದ್ದುಕೊಂಡಿತ್ತು ನಿಧಾನವಾಗಿ ಕುಂಟುತ್ತಾ ರಸ್ತೆ ದಾಟಿತು.

ಈ ಕಡೆ ಹಾಲು ವ್ಯಾಪಾರಿಯನ್ನು ಮೇಲೆತ್ತಲು ಜನರು ಆತನ ಬಳಿ ತೆರಳಿದರೂ ಕೂಡ ಚಿರತೆ ದಾಳಿ ಮಾಡಿದರೆ ಎಂದು ಭಯಗೊಂಡಿದ್ದರು. ಉದಯಪುರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ದಾಳಿ ಹೆಚ್ಚುತ್ತಿದೆ. ಕಳೆದ ತಿಂಗಳು ನಗರದಲ್ಲಿ ಚಿರತೆ ದಾಳಿಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಅಲ್ವಾರ್, ದೌಸಾ, ಜೈಪುರ ಮತ್ತು ಸಿಕಾರ್‌ಗಳಲ್ಲಿಯೂ ಇದೇ ರೀತಿಯ ಘಟನೆಗಳು ವರದಿಯಾಗಿವೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ