‘ಆಗ್ತಿರೋದು ನೋಡಿದಾಗ ಬೇಸರ ಶುರುವಾಯ್ತು’: ದರ್ಶನ್​ ಕೇಸ್​ ಬಗ್ಗೆ ವಿಜಯ್​ ರಾಘವೇಂದ್ರ ಮಾತು

ರೇಣುಕಾ ಸ್ವಾಮಿ ಹತ್ಯೆಯ ಬಳಿಕ ಚಿತ್ರರಂಗದಲ್ಲಿ ಒಂದು ಬೇಸರದ ಛಾಯೆ ಆವರಿಸಿದೆ. ‘ಆದಷ್ಟು ಬೇಗ ಈ ಕಹಿ ಪರಿಸ್ಥಿತಿಯಿಂದ ನಮ್ಮ ಚಿತ್ರರಂಗ ಹೊರಗಡೆ ಬರಲಿ, ಕರ್ನಾಟಕ ಹೊರಗಡೆ ಬರಲಿ’ ಎಂದು ವಿಜಯ್​ ರಾಘವೇಂದ್ರ ಹೇಳಿದ್ದಾರೆ. ದರ್ಶನ್​ ಅವರು ಜೈಲು ಸೇರಿರುವುದು ತಮಗೆ ಬೇಸರ ಮೂಡಿಸಿದೆ ಎಂದು ಅವರು ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ..

‘ಆಗ್ತಿರೋದು ನೋಡಿದಾಗ ಬೇಸರ ಶುರುವಾಯ್ತು’: ದರ್ಶನ್​ ಕೇಸ್​ ಬಗ್ಗೆ ವಿಜಯ್​ ರಾಘವೇಂದ್ರ ಮಾತು
|

Updated on: Jul 11, 2024 | 10:56 PM

ನಟ ವಿಜಯ್​ ರಾಘವೇಂದ್ರ ಅವರು ದರ್ಶನ್​ ಕೇಸ್​ ಬಗ್ಗೆ ಮಾತನಾಡಿದ್ದಾರೆ. ಒಂದು ಚಿಕ್ಕ ಕಾರಣದಿಂದ ರೇಣುಕಾಸ್ವಾಮಿಯ ಕೊಲೆ ನಡೆದುಹೋಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ದರ್ಶನ್​, ಪವಿತ್ರಾ ಗೌಡ ಮತ್ತು ಅವರ ಸಹಚರರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಎಲ್ಲ ಘಟನೆಗಳ ಬಗ್ಗೆ ವಿಜಯ್​ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ‘ಮೊದಲಿಗೆ ಎಲ್ಲರಿಗೂ ಶಾಕ್​ ಆಯಿತು. ಬಳಿಕ ಏನೇನೋ ಕಥೆಗಳನ್ನು ಕೇಳಿ ಕುತೂಹಲ ಮೂಡಿದೆ. ಆಮೇಲೆ ಆಗುತ್ತಿರುವುದೆಲ್ಲ ನೋಡಿದಾಗ ಬೇಸರ ಆಗೋಕೆ ಶುರುವಾಯಿತು. ನಿಮಗೆ ಗೊತ್ತಿರುವುದಕ್ಕಿಂತ ಕಡಿಮೆ ವಿಚಾರ ನನಗೆ ಗೊತ್ತು. ಕಾನೂನು ಇದೆ. ಸಿನಿಮಾರಂಗದಲ್ಲಿ ನಮ್ಮದು ಒಂದು ಕುಟುಂಬ. ಆ ಕುಟುಂಬದಲ್ಲಿ ಬೇಸರ ಇದೆ. ಈ ಪರಿಸ್ಥಿತಿಗೆ ಬಲಿಯಾದ ಇನ್ನೊಂದು ಕುಟುಂಬ ಇದೆ. ಈ ಘಟನೆ ಆಗಿಹೋಗಿದೆ. ನಮ್ಮ ಸಿನಿಮಾರಂಗದ ಕುಟುಂಬದವರೇ ಆದ ದರ್ಶನ್​ ಅವರು ಈ ರೀತಿಯ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬ ಬೇಸರ ನಮಗೆ ಇದೆ’ ಎಂದಿದ್ದಾರೆ ವಿಜಯ್​ ರಾಘವೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us
ಊರುಗೋಲಿನ ಸಹಾಯದಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಬಿಜೆಪಿ ಕಾರ್ಯಕರ್ತ
ಊರುಗೋಲಿನ ಸಹಾಯದಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಬಿಜೆಪಿ ಕಾರ್ಯಕರ್ತ
ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್
ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್
ಬೌಂಡರಿ ಲೈನ್​ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಮಿಚೆಲ್ ಸ್ಯಾಂಟ್ನರ್
ಬೌಂಡರಿ ಲೈನ್​ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಮಿಚೆಲ್ ಸ್ಯಾಂಟ್ನರ್
ಹೇಗಿರಲಿದೆ ತರುಣ್ ಸುಧೀರ್-ಸೋನಲ್ ವಿವಾಹ? ಮಾಹಿತಿ ಕೊಟ್ಟ ಜೋಡಿ
ಹೇಗಿರಲಿದೆ ತರುಣ್ ಸುಧೀರ್-ಸೋನಲ್ ವಿವಾಹ? ಮಾಹಿತಿ ಕೊಟ್ಟ ಜೋಡಿ
‘ದ್ವಾಪರ..’ ಹಾಡನ್ನು ಬರೆಯೋಕೆ ನಾಗೇಂದ್ರ ಪ್ರಸಾದ್ ತೆಗೆದುಕೊಂಡ ಸಮಯ ಇಷ್ಟೇ.
‘ದ್ವಾಪರ..’ ಹಾಡನ್ನು ಬರೆಯೋಕೆ ನಾಗೇಂದ್ರ ಪ್ರಸಾದ್ ತೆಗೆದುಕೊಂಡ ಸಮಯ ಇಷ್ಟೇ.
ಮಳೆಯಿಂದ ಅತಿವೃಷ್ಟಿ ಅನಾಹುತ ಕಡಿಮೆಯಾಗಲೆಂದು ಕಳಸೇಶ್ವರನಿಗೆ ಅಗಿಲು ಸೇವೆ
ಮಳೆಯಿಂದ ಅತಿವೃಷ್ಟಿ ಅನಾಹುತ ಕಡಿಮೆಯಾಗಲೆಂದು ಕಳಸೇಶ್ವರನಿಗೆ ಅಗಿಲು ಸೇವೆ
ಮುಡಾ ಹಗರಣ ವಿರುದ್ಧ ಮೈತ್ರಿನಾಯಕರ ಪಾದಯಾತ್ರೆ, ಲೈವ್ ವೀಕ್ಷಿಸಿ
ಮುಡಾ ಹಗರಣ ವಿರುದ್ಧ ಮೈತ್ರಿನಾಯಕರ ಪಾದಯಾತ್ರೆ, ಲೈವ್ ವೀಕ್ಷಿಸಿ
Vaastu Tips: ದಕ್ಷಿಣ ದಿಕ್ಕಿಗೆ ಬಾಗಿಲು ಇದ್ದರೆ ಏನೆಲ್ಲಾ ಪ್ರಯೋಜನ
Vaastu Tips: ದಕ್ಷಿಣ ದಿಕ್ಕಿಗೆ ಬಾಗಿಲು ಇದ್ದರೆ ಏನೆಲ್ಲಾ ಪ್ರಯೋಜನ
Nithya Bhavishya: ಈ ರಾಶಿಯವರಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ
Nithya Bhavishya: ಈ ರಾಶಿಯವರಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ
ತುಂಬಿ ನಿಂತ ಕೃಷ್ಣಾ ನದಿ; ಶ್ರೀಶೈಲಂ ಡ್ಯಾಂ ಸೊಬಗು ನೋಡಲು 2 ಕಣ್ಣು ಸಾಲದು!
ತುಂಬಿ ನಿಂತ ಕೃಷ್ಣಾ ನದಿ; ಶ್ರೀಶೈಲಂ ಡ್ಯಾಂ ಸೊಬಗು ನೋಡಲು 2 ಕಣ್ಣು ಸಾಲದು!