‘ಆಗ್ತಿರೋದು ನೋಡಿದಾಗ ಬೇಸರ ಶುರುವಾಯ್ತು’: ದರ್ಶನ್​ ಕೇಸ್​ ಬಗ್ಗೆ ವಿಜಯ್​ ರಾಘವೇಂದ್ರ ಮಾತು

Updated on: Jul 11, 2024 | 10:56 PM

ರೇಣುಕಾ ಸ್ವಾಮಿ ಹತ್ಯೆಯ ಬಳಿಕ ಚಿತ್ರರಂಗದಲ್ಲಿ ಒಂದು ಬೇಸರದ ಛಾಯೆ ಆವರಿಸಿದೆ. ‘ಆದಷ್ಟು ಬೇಗ ಈ ಕಹಿ ಪರಿಸ್ಥಿತಿಯಿಂದ ನಮ್ಮ ಚಿತ್ರರಂಗ ಹೊರಗಡೆ ಬರಲಿ, ಕರ್ನಾಟಕ ಹೊರಗಡೆ ಬರಲಿ’ ಎಂದು ವಿಜಯ್​ ರಾಘವೇಂದ್ರ ಹೇಳಿದ್ದಾರೆ. ದರ್ಶನ್​ ಅವರು ಜೈಲು ಸೇರಿರುವುದು ತಮಗೆ ಬೇಸರ ಮೂಡಿಸಿದೆ ಎಂದು ಅವರು ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ..

ನಟ ವಿಜಯ್​ ರಾಘವೇಂದ್ರ ಅವರು ದರ್ಶನ್​ ಕೇಸ್​ ಬಗ್ಗೆ ಮಾತನಾಡಿದ್ದಾರೆ. ಒಂದು ಚಿಕ್ಕ ಕಾರಣದಿಂದ ರೇಣುಕಾಸ್ವಾಮಿಯ ಕೊಲೆ ನಡೆದುಹೋಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ದರ್ಶನ್​, ಪವಿತ್ರಾ ಗೌಡ ಮತ್ತು ಅವರ ಸಹಚರರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಎಲ್ಲ ಘಟನೆಗಳ ಬಗ್ಗೆ ವಿಜಯ್​ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ‘ಮೊದಲಿಗೆ ಎಲ್ಲರಿಗೂ ಶಾಕ್​ ಆಯಿತು. ಬಳಿಕ ಏನೇನೋ ಕಥೆಗಳನ್ನು ಕೇಳಿ ಕುತೂಹಲ ಮೂಡಿದೆ. ಆಮೇಲೆ ಆಗುತ್ತಿರುವುದೆಲ್ಲ ನೋಡಿದಾಗ ಬೇಸರ ಆಗೋಕೆ ಶುರುವಾಯಿತು. ನಿಮಗೆ ಗೊತ್ತಿರುವುದಕ್ಕಿಂತ ಕಡಿಮೆ ವಿಚಾರ ನನಗೆ ಗೊತ್ತು. ಕಾನೂನು ಇದೆ. ಸಿನಿಮಾರಂಗದಲ್ಲಿ ನಮ್ಮದು ಒಂದು ಕುಟುಂಬ. ಆ ಕುಟುಂಬದಲ್ಲಿ ಬೇಸರ ಇದೆ. ಈ ಪರಿಸ್ಥಿತಿಗೆ ಬಲಿಯಾದ ಇನ್ನೊಂದು ಕುಟುಂಬ ಇದೆ. ಈ ಘಟನೆ ಆಗಿಹೋಗಿದೆ. ನಮ್ಮ ಸಿನಿಮಾರಂಗದ ಕುಟುಂಬದವರೇ ಆದ ದರ್ಶನ್​ ಅವರು ಈ ರೀತಿಯ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬ ಬೇಸರ ನಮಗೆ ಇದೆ’ ಎಂದಿದ್ದಾರೆ ವಿಜಯ್​ ರಾಘವೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More