Bone Fracture: ಸ್ಪರ್ಧಾಳು ಪಕ್ಕದಲ್ಲಿ ನಿಂತಿದ್ದವನ ಕಾಲಿನ ಮೇಲೆ ಜಾರಿಬಿತ್ತು 175 ಕೆಜಿ ತೂಕದ ಗುಂಡುಕಲ್ಲು! ಮುರಿದ ಕಾಲು ಮೂಳೆ
ಮೂಲ ನಂದೀಶ್ವರ ದೇವಸ್ಥಾನ ಜಾತ್ರೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗುಂಡು ಕಲ್ಲು ಹಾಗೂ ಸಾಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಶಿವನಗೌಡ ಪಾಟೀಲ್ ಕಾಲಿನ ಮೇಲೆ ಗುಂಡು ಕಲ್ಲು ಬಿದ್ದಿದೆ. ಪೈಲ್ವಾನ್ ಚಂದ್ರಶೇಖರ್ ಯಾಳವಾರ್ 175 ಕೆ.ಜಿ ಗುಂಡು ಕಲ್ಲು ಎತ್ತುತ್ತಿದ್ದರು. ಗುಂಡು ಕಲ್ಲು ಕೆಳಗಿಳಿಸೋ ವೇಳೆ ಅವಘಡ ನಡೆದಿದೆ.
ವಿಜಯಪುರ, ಸೆಪ್ಟೆಂಬರ್ 7: ಗುಂಡು ಕಲ್ಲು ಎತ್ತುವ ಸ್ಪರ್ಧೆ (Rock Lifting) ವೇಳೆ ಅವಘಡ ಸಂಭವಿಸಿದೆ. ಗುಂಡು ಕಲ್ಲು ಎತ್ತುವ ಸ್ಪರ್ಧಾಳು (Competitor) ಜೊತೆಗಿದ್ದವನ ಕಾಲಿನ ಮೇಲೆ 175 ಕೆಜಿ ತೂಕದ ಗುಂಡು ಕಲ್ಲು ಜಾರಿ ಬಿದ್ದಿದೆ. ವಿಜಯಪುರ ಜಿಲ್ಲೆ (Vijayapura) ಬಸವನಬಾಗೇವಾಡಿ ಪಟ್ಟಣದಲ್ಲಿ ನಿನ್ನೆ ಬುಧವಾರ ಘಟನೆ ಬೆಳಕಿಗೆ ಬಂದಿದೆ. ಮೂಲ ನಂದೀಶ್ವರ ದೇವಸ್ಥಾನ ಜಾತ್ರೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗುಂಡು ಕಲ್ಲು ಹಾಗೂ ಸಾಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಶಿವನಗೌಡ ಪಾಟೀಲ್ ಕಾಲಿನ ಮೇಲೆ ಗುಂಡು ಕಲ್ಲು ಬಿದ್ದಿದೆ.
ಪೈಲ್ವಾನ್ ಚಂದ್ರಶೇಖರ್ ಯಾಳವಾರ್ 175 ಕೆ.ಜಿ ಗುಂಡು ಕಲ್ಲು ಎತ್ತುತ್ತಿದ್ದರು. ಗುಂಡು ಕಲ್ಲು ಕೆಳಗಿಳಿಸೋ ವೇಳೆ ಅವಘಡ ನಡೆದಿದೆ. ಶಿವನಗೌಡ ಕಾಲು ಮೂಳೆ ಮುರಿದಿದ್ದು (Bone Fracture), ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಕ್ಷಣ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ಸ್ಥಳೀಯರು ಮೂಳೆ ಮುರಿದುಕೊಂಡು ಒದ್ದಲಾಡುತ್ತಿದ್ದ ಶಿವನಗೌಡ ನೆರವಿಗೆ ಧಾವಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್ ರಿಯಾಕ್ಷನ್
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್ನ ಕಾಮಕಾಂಡ
