ಚಂದನವನದ ಅನೇಕರ ಜೊತೆ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಬಾಂಧವ್ಯ ಇದೆ. ಹಿರಿಯ ನಟರಿಂದ ಹಿಡಿದು, ಇತ್ತೀಚಿನ ವರ್ಷಗಳಲ್ಲಿ ಬಂದ ಕಿರಿಯರವರೆಗೆ ಹಲವರ ಜೊತೆಗೂ ಸುದೀಪ್ ಅವರು ಸ್ನೇಹ ಹೊಂದಿದ್ದಾರೆ. ರವಿಚಂದ್ರನ್, ಶಿವರಾಜ್ಕುಮಾರ್ (Shivarajkumar) ಎಂದರೆ ಅವರಿಗೆ ಎಲ್ಲಿಲ್ಲದ ಗೌರವ. ಆದರೆ ಒಂದು ಸಮಯದಲ್ಲಿ ಶಿವಣ್ಣನ ಜೊತೆ ಕಿಚ್ಚ ಮಾತನಾಡುತ್ತಿರಲಿಲ್ಲವಂತೆ. ಆ ಸಂದರ್ಭದ ಬಗ್ಗೆ ಸುದೀಪ್ ಈಗ ಮಾತನಾಡಿದ್ದಾರೆ. ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಬಿಡುಗಡೆಗೆ ಹತ್ತಿರವಾಗುತ್ತಿದ್ದು, ಈ ಸಂದರ್ಭದಲ್ಲಿ ‘ಟಿವಿ9 ಕನ್ನಡ’ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಿವಣ್ಣ, ರವಿಚಂದ್ರನ್ ಬಗ್ಗೆ ಸುದೀಪ್ ಮಾತನಾಡಿದ ವಿಡಿಯೋ ಇಲ್ಲಿದೆ..
ಇದನ್ನೂ ಓದಿ: ಕನ್ನಡ ಶಾಲೆಗಾಗಿ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್
ಪುನೀತ್ ರಾಜ್ಕುಮಾರ್ ಬಯೋಗ್ರಫಿ ಬಿಡುಗಡೆ ಮಾಡಿ, ಭಾವುಕರಾದ ಕಿಚ್ಚ ಸುದೀಪ್
Published On - 11:58 am, Mon, 27 June 22