AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೊಲೀಸ್​ ಕೇಸ್​ ಬಗ್ಗೆ ಈಗ ಗೊತ್ತಾಯ್ತು’: ದೊಡ್ಮನೆಯಿಂದ ಹೊರಬಂದ ವಿನಯ್​ಗೆ ಅಚ್ಚರಿ

‘ಪೊಲೀಸ್​ ಕೇಸ್​ ಬಗ್ಗೆ ಈಗ ಗೊತ್ತಾಯ್ತು’: ದೊಡ್ಮನೆಯಿಂದ ಹೊರಬಂದ ವಿನಯ್​ಗೆ ಅಚ್ಚರಿ

ಮದನ್​ ಕುಮಾರ್​
|

Updated on: Jan 29, 2024 | 5:43 PM

Share

ಈ ಕೇಸ್​ಗಳ ಬಗ್ಗೆ ವಿನಯ್​ ಗೌಡ ಅವರಿಗೆ ತಿಳಿದೇ ಇರಲಿಲ್ಲ. ಇಷ್ಟೆಲ್ಲ ಆಗಿದೆ ಎಂಬುದು ಬಿಗ್​ ಬಾಸ್​ನಿಂದ ಹೊರಬಂದ ನಂತರ ಅವರಿಗೆ ಗೊತ್ತಾಗಿದೆ. ‘ಓಹ್​ ಮೈ ಗಾಡ್​’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಿಗ್​ ಬಾಸ್​ ಶೋನಲ್ಲಿ ಅವರು 3ನೇ ರನ್ನರ್​ಅಪ್​ ಆಗಿದ್ದಾರೆ. ಕಾರ್ತಿಕ್ ಮಹೇಶ್​ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

‘ಬಿಗ್​ ಬಾಸ್​ ಕನ್ನಡ’  (Bigg Boss Kannada) ಕಾರ್ಯಕ್ರಮದ ಇದುವರೆಗಿನ ಸೀಸನ್​ಗಳಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದೇ 10ನೇ ಸೀಸನ್​. ಈ ಶೋನಲ್ಲಿ ವಿನಯ್​ ಗೌಡ, ವರ್ತೂರು ಸಂತೋಷ್​, ತನಿಷಾ ಕುಪ್ಪಂಡ, ಡ್ರೋನ್​ ಪ್ರತಾಪ್​ (Drone Prathap), ಸಂಗೀತಾ ಶೃಂಗೇರಿ, ಕಾರ್ತಿಕ್​ ಮಹೇಶ್​ ಮುಂತಾದವರು ಸ್ಪರ್ಧಿಸಿದ್ದರು. ದೊಡ್ಮನೆಯೊಳಗೆ ನಡೆದ ವಿಚಾರಗಳು ಹೊರ ಜಗತ್ತಿನಲ್ಲಿ ಸಾಕಷ್ಟು ಸುದ್ದಿ ಆಗಿದ್ದವು. ಡ್ರೋನ್​ ಪ್ರತಾಪ್​ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಯ ಬೆನ್ನಲ್ಲೇ ಪೊಲೀಸರು ಬಿಗ್​ ಬಾಸ್​ ಮನೆಗೆ ಭೇಟಿ ನೀಡಿದ್ದರು. ತನಿಷಾ ಕುಪ್ಪಂಡ ಅವರು ಜಾತಿ ನಿಂದನೆ ಪದ ಬಳಸಿದ್ದು ಕೂಡ ಪೊಲೀಸ್​ ಕೇಸ್​ ಆಗಿತ್ತು. ಆದರೆ ಈ ಕೇಸ್​ಗಳ ಬಗ್ಗೆ ವಿನಯ್​ ಗೌಡ (Vinay Gowda) ಅವರಿಗೆ ತಿಳಿದೇ ಇಲ್ಲ. ಇಷ್ಟೆಲ್ಲ ಆಗಿದೆ ಎಂಬುದು ಬಿಗ್​ ಬಾಸ್​ನಿಂದ ಹೊರಬಂದ ನಂತರ ಅವರಿಗೆ ಗೊತ್ತಾಗಿದೆ. ‘ಓಹ್​ ಮೈ ಗಾಡ್​’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಪೊಲೀಸ್​ ಬಂದ ವಿಷಯ ನನಗೆ ತಿಳಿದಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More