AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ತಂದೆಯ ಸ್ಮರಿಸಿದ ವಿನೋದ್ ಪ್ರಭಾಕರ್

‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ತಂದೆಯ ಸ್ಮರಿಸಿದ ವಿನೋದ್ ಪ್ರಭಾಕರ್

ಮದನ್​ ಕುಮಾರ್​
|

Updated on: Jun 19, 2026 | 8:22 PM

Share

ಬಹುನಿರೀಕ್ಷಿತ ‘ಬಲರಾಮನ ದಿನಗಳು’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಂದೆ ಟೈಗರ್ ಪ್ರಭಾಕರ್ ಅವರನ್ನು ವಿನೋದ್ ನೆನಪಿಸಿಕೊಂಡರು. ಸುದ್ದಿಗೋಷ್ಠಿಯ ವಿಡಿಯೋ ಇಲ್ಲಿದೆ. ಈ ಸಿನಿಮಾ ಜೂನ್ 26ರಂದು ರಿಲೀಸ್ ಆಗಲಿದೆ.

ಬಹುನಿರೀಕ್ಷಿತ ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಂದೆ ಟೈಗರ್ ಪ್ರಭಾಕರ್ ಅವರನ್ನು ವಿನೋದ್ ನೆನಪಿಸಿಕೊಂಡರು. ‘ನಾನು ಇಲ್ಲಿ ನಿಂತಿದ್ದಕ್ಕೆ ನಮ್ಮ ತಂದೆ ಟೈಗರ್ ಪ್ರಭಾಕರ್ ಕಾರಣ. ಅವರು ಬಿಟ್ಟು ಹೋದ ಅಧ್ಯಾಯ ನಾನು. ಅವರು 52ನೇ ವರ್ಷಕ್ಕೆ ತೀರಿ ಹೋದರು. ಅವರ ಕನಸುಗಳು ಇನ್ನೂ ಬಹಳ ಇತ್ತು. ಕೆಲವು ಸಿನಿಮಾಗಳನ್ನು ನಮ್ಮ ತಂದೆಯವರು ಮಾಡಬೇಕಾಗಿತ್ತು. ಅವರ ಕನಸು ನನಗೆ ಗೊತ್ತಿತ್ತು. ಅದು ಬಲರಾಮನ ದಿನಗಳು ಕೂಡ ಆಗಿರಬಹುದು. ನಾವು ಯಾವುದೇ ಪ್ರಶಸ್ತಿ ತೆಗೆದುಕೊಂಡರೂ ನಮ್ಮ ತಂದೆಗೆ ಅರ್ಪಿಸುತ್ತೇನೆ’ ಎಂದು ಅವರು ಹೇಳಿದರು. ‘ಬಲರಾಮನ ದಿನಗಳು’ ಸಿನಿಮಾ ಜೂನ್ 26ರಂದು ಬಿಡುಗಡೆ ಆಗಲಿದೆ. ಕೆ.ಎಂ. ಚೈತನ್ಯ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us