AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಗೆ ನೀರಿನ ಸಮಸ್ಯೆಯ ದೂರಿನ ಪತ್ರಗಳನ್ನು ಕಟ್ಟಿಕೊಂಡು ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ

ಮೈಗೆ ನೀರಿನ ಸಮಸ್ಯೆಯ ದೂರಿನ ಪತ್ರಗಳನ್ನು ಕಟ್ಟಿಕೊಂಡು ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ

ಸುಷ್ಮಾ ಚಕ್ರೆ
|

Updated on: Apr 04, 2025 | 8:19 PM

ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ನೀರಿನ ಸಮಸ್ಯೆಗಳ ಬಗ್ಗೆ ದೂರುಗಳ ಮಾಲೆಗಳನ್ನು ಕಟ್ಟಿಕೊಂಡು ತೆವಳುತ್ತಾ ಸರ್ಕಾರಿ ಕಚೇರಿಗೆ ಬಂದಿದ್ದಾರೆ. ಬಿಶನ್‌ಖೇಡಿ ನಿವಾಸಿ ಬಜರಂಗಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಗ್ರಾಮದಲ್ಲಿ ನೀರು ಸಿಗುವುದು ಒಂದು ದೊಡ್ಡ ಸವಾಲಾಗಿರುವುದರಿಂದ ತಾನು ಈ ಅಸಾಮಾನ್ಯ ಪ್ಲಾನ್ ಮಾಡುವುದಾಗಿ ಹೇಳಿದ್ದಾರೆ. ನೀರಿನ ಕೊರತೆ ಎಷ್ಟು ತೀವ್ರವಾಗಿದೆಯೆಂದರೆ, ಜನರು, ವಿಶೇಷವಾಗಿ ಮಹಿಳೆಯರು, ಪ್ರಕೃತಿಯ ಕರೆಗಾಗಿ ಸಾಕಷ್ಟು ನೀರನ್ನು ಹೊತ್ತುಕೊಂಡು ಹೋಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ನವದೆಹಲಿ, ಏಪ್ರಿಲ್ 4: ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ದೇಹಕ್ಕೆ ದಾರದಿಂದ ದೂರುಗಳ ಮಾಲೆಯನ್ನು ಕಟ್ಟಿಕೊಂಡು ತಮ್ಮ ಗ್ರಾಮದಲ್ಲಿ ನೀರಿನ ಕೊರತೆಯನ್ನು ಎತ್ತಿ ತೋರಿಸಲು ಸರ್ಕಾರಿ ಕಚೇರಿಗೆ ತೆವಳುತ್ತಾ ಬಂದಿದ್ದಾರೆ. ನಮ್ಮ ಗ್ರಾಮದಲ್ಲಿ ನೀರು ಪಡೆಯುವುದು ಒಂದು ದೊಡ್ಡ ಸವಾಲಾಗಿದ್ದು, ಅಧಿಕಾರಿಗಳು ಪ್ರಶ್ನಿಸಿರುವ ಕಾರಣ ನಾವು ಈ ಅಸಾಮಾನ್ಯ ವಿಧಾನವನ್ನು ಆಶ್ರಯಿಸಿರುವುದಾಗಿ ಹೇಳಿದ್ದಾರೆ. “ನಾನು ನೀರಿಗಾಗಿ ಇಲ್ಲಿಗೆ ಬಂದಿದ್ದೇನೆ. ಗ್ರಾಮದಲ್ಲಿನ ನೀರಿನ ಬಿಕ್ಕಟ್ಟನ್ನು ಎತ್ತಿ ತೋರಿಸಲು ನಾನು ಜಿಲ್ಲಾಧಿಕಾರಿ, ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದೆ. ಏನೂ ಆಗದಿದ್ದಾಗ, ನಾನು ದೂರುಗಳ ಮಾಲೆಯೊಂದಿಗೆ ಇಲ್ಲಿಗೆ ಬಂದಿದ್ದೇನೆ” ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ