Karnataka Budget Session: ವಿಶ್ವನಾಥ್ ಮತ್ತು ಬೈರತಿ ಸುರೇಶ್ ಬೀಗರಾದರೇನು, ರಾಜಕಾರಣ ಮತ್ತು ಸದನದಲ್ಲಿ ವಿರೋಧಿಗಳು!

ಅರುಣ್​ ಕುಮಾರ್​ ಬೆಳ್ಳಿ

Updated on: Mar 14, 2025 | 12:49 PM

ವಿಶ್ವನಾಥ್ ಅವರ ಆಕ್ಷೇಪಣೆಗೆ ಪ್ರತಿಕ್ರಿಯೆ ನೀಡುವ ಸಚಿವ ಸುರೇಶ್, ಶಾಸಕರು ವಿನಾಕಾರಣ ಸರ್ಕಾರವನ್ನು ದೂರುತ್ತಿದ್ದಾರೆ, ನಗರಸಭೆ ಮತ್ತು ಪುರಸಭೆಗಳು ಖರ್ಚು ವೆಚ್ಚಗಳನ್ನು ತಾವೇ ನೋಡಿಕೊಳ್ಳಬೇಕು, ಅವುಗಳಿಗೆ ಆದಾಯದ ಮೂಲ ಇದ್ದೇ ಇರುತ್ತದೆ, ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬನೆ ಸರಿಯಲ್ಲ ಎಂದು ಹೇಳುತ್ತಾರೆ.

ಬೆಂಗಳೂರು, 14 ಮಾರ್ಚ್: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Byrathi Suresh) ಮತ್ತು ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಬೀಗರು ಅನ್ನೋದು ಕನ್ನಡಿಗರಿಎಗ ಗೊತ್ತು. ಆದರೆ ರಾಜಕಾರಣದಲ್ಲಿ ಅವರು ಬೇರೆ ಬೇರೆ ಪಕ್ಷಗಳ ಶಾಸಕರು. ನಗರಸಭೆಗಳಿಗೆ ಅನುದಾನ ಸಿಗದ ವಿಷಯದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ವಿಶ್ವನಾಥ್ ತಾನು ಯಲಹಂಕ ಪುರಸಭೆಯನ್ನು ಹರಸಾಹಸಪಟ್ಟು ನಗರಸಭೆಗೆ ಅಪ್ಗ್ರೇಡ್ ಮಾಡಿಸಿಕೊಂಡಿದ್ದು ವ್ಯರ್ಥ ಅನಿಸುತ್ತಿದೆ, ಕಳೆದ ಎರಡು ವರ್ಷಗಳಿಂದ ಒಂದು ರೂಪಾಯಿ ಅನುದಾನವೂ ಯಲಹಂಜ ನಗರಸಭೆಗೆ ಸಿಕ್ಕಿಲ್ಲ ಎನ್ನುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕಾಂಗ್ರೆಸ್​ ಒಳಜಗಳ: ಡಿಸಿಸಿ ಬ್ಯಾಂಕ್​ ಮತ್ತು ಕೋಮುಲ್​ಗೆ ಸಂಕಷ್ಟ   

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.