ಪಹಣಿಯಲ್ಲಿ ವಕ್ಫ್​​ ಹೆಸರು: ಜಿಲ್ಲಾಧಿಕಾರಿ ಕಚೇರಿ ಎದುರು ವಿಜಯಪುರ ರೈತರ ಪ್ರತಿಭಟನೆ

ಪಹಣಿಯಲ್ಲಿ ವಕ್ಫ್​​ ಹೆಸರು: ಜಿಲ್ಲಾಧಿಕಾರಿ ಕಚೇರಿ ಎದುರು ವಿಜಯಪುರ ರೈತರ ಪ್ರತಿಭಟನೆ
| Updated By: ವಿವೇಕ ಬಿರಾದಾರ

Updated on: Oct 26, 2024 | 12:46 PM

Vijayapura Waqf Raw: ರೈತರ ಜಮೀನಿನ ಪಹಣಿಯಲ್ಲಿ ವಕ್ಫ್​​ ಬೋರ್ಡ್ ಎಂದು ನಮೂದು ಮಾಡಿದ ಕಂದಾಯ‌ ಇಲಾಖೆ ವಿರುದ್ಧ ವಿಜಯಪುರ ರೈತರು ಧರಣಿ ನಡೆಸಿದ್ದಾರೆ. ಅಧಿಕಾರಿಗಳು ತಿಳವಳಿಕೆ ಪತ್ರ ನೀಡದೇ ರೈತರ ಪಹಣಿಯಲ್ಲಿ ವಕ್ಫ್​ ಬೋರ್ಡ್ ಎಂದು ನಮೂದು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಜಯಪುರ, ಅಕ್ಟೋಬರ್ 26: ರೈತರ ಜಮೀನಿನ ಪಹಣಿಯಲ್ಲಿ ವಕ್ಫ್​​ ಬೋರ್ಡ್ (Vijayapura Waqf Board) ಎಂದು ನಮೂದು ಮಾಡಿದ ಕಂದಾಯ‌ ಇಲಾಖೆ ವಿರುದ್ಧ ವಿಜಯಪುರ ರೈತರು ಧರಣಿ ನಡೆಸಿದ್ದಾರೆ. ಅಧಿಕಾರಿಗಳು ತಿಳವಳಿಕೆ ಪತ್ರ ನೀಡದೇ ರೈತರ ಪಹಣಿಯಲ್ಲಿ ವಕ್ಫ್​ ಬೋರ್ಡ್ ಎಂದು ನಮೂದು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ರೈತರು ಪ್ರತಿಭಟನೆ ನಡೆಸಿದರು. ವಕ್ಫ್​ ಬೋರ್ಡ್ ನಮೂದಾಗುವ ಮುಂಚಿನ ಹಾಗೂ ವಕ್ಫ್​ ನಮೂದಾದ ಪಹಣಿ ಪತ್ರ ಹಿಡಿದು ಮೌನ ಪ್ರತಿಭಟನೆ ನಡೆಸಿದರು. ವಕ್ಫ್​ ಎಂದು ನಮೂದಾಗಿದ್ದನ್ನು ತೆಗೆಯಬೇಕೆಂದು ಒತ್ತಾಯಿಸಿದರು.

1954ರಲ್ಲಿ ಜವಾಹರ ಲಾಲ್ ನೆಹರು ಅವರು ಪ್ರಧಾನಿಯಾಗಿದ್ದಾಗ ವಕ್ಫ್​ ಕಾಯ್ದೆಯನ್ನು ಲೋಕಸಭೆಯಲ್ಲಿ ಜಾರಿ ಮಾಡಿದರು. 1995ರಲ್ಲಿ ನರಸಿಂಹರಾವ್ ಪ್ರಧಾನಿಯಾಗಿದ್ದ ವೇಳೆ ವಕ್ಫ್​ಗೆ ಹೆಚ್ಚಿನ ಅಧಿಕಾರ ನೀಡಿದರು. 2013ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸಂಪೂರ್ಣ ಸ್ವಾಯತ್ತತೆ ನೀಡಿದರು. ವಕ್ಫ್​ ನಡೆಯನ್ನು ಯಾರೂ ಪ್ರಶ್ನೆ ಮಾಡದಂತೆ ಕಾಯ್ದೆ ಜಾರಿ ಮಾಡಿದರು.

ವಕ್ಫ್​ ಬೋರ್ಡ್ ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲೂ ಪ್ರಶ್ನೆ ಮಾಡದಂತೆ ನಿಯಮ ಮಾಡಿದರು. ಇದರಿಂದ ನಾವು ವಕ್ಫ್​ ಟ್ರಿಬ್ಯೂನಲ್ ಮುಂದೆ ಹೋಗುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಿಜಯಪುರ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್​ ಹೆಸರು: ಕಂಗಾಲಾದ ಅನ್ನದಾತ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us