AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾರ್ಮಾಡಿ ಘಾಟ್​ನಲ್ಲಿ ಮಳೆ, ರಸ್ತೆಗುಂಟ ನದಿಯೋಪಾದಿಯಲ್ಲಿ ಹರಿದ ನೀರು

ಚಾರ್ಮಾಡಿ ಘಾಟ್​ನಲ್ಲಿ ಮಳೆ, ರಸ್ತೆಗುಂಟ ನದಿಯೋಪಾದಿಯಲ್ಲಿ ಹರಿದ ನೀರು

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 10, 2024 | 10:29 AM

Share

ಗುಡ್ಡದ ಮೇಲಿಂದ ಕೆಳಕ್ಕೆ ಹರಿಯುತ್ತಿರುವ ನೀರು ರಸ್ತೆಗುಂಟ ಸಾಗಿ ಹೊಗುತ್ತಿರುವುದು ಸೋಜಿಗದ ಸಂಗತಿಯೇ. ಮಳೆಗಾಲದಲ್ಲಿ ನಮಗೆ ಇಂಥ ದೃಶ್ಯಗಳು ನೋಡಲು ಸಿಕ್ಕಲಾರವು. ಘಾಟ್ ಪ್ರದೇಶಗಳಲ್ಲಿ ಮಳೆ ವರ್ಷದ ಎಲ್ಲ ಸಮಯದಲ್ಲಿ ಆಗುತ್ತಿರುತ್ತದೆ, ಅದರೆ ಅಲ್ಪ ಪ್ರಮಾಣದಲ್ಲಿ. ಇದು ದೊಡ್ಡ ಪ್ರಮಾಣದ ಮಳೆ.

ಮಂಗಳೂರು: ಮಳೆಗಾಲ ತೀರಿತು ಅಂತ ನಿಟ್ಟುಸಿರಾಗಿದ್ದರೆ ನೀವು ನಿರೀಕ್ಷಿಸಿದ ಸ್ಥಿತಿ ಎದುರಾಗಬಹುದು. ಚಾರ್ಮಾಡಿ ಘಾಟ್ ನಲ್ಲಿ ಕಂಡ ದೃಶ್ಯವಿದು. ಈ ಭಾಗದಲ್ಲಿ ನಿನ್ನೆ ಮಳೆ ಸುರಿದ ಕಾರಣ ಗುಡ್ಡಗಳಿಂದ ಜಾರಿದ ನೀರು ರಸ್ತೆಯ ಮೇಲೆ ನದಿಯೋಪಾದಿಯಲ್ಲಿ ಹರಿಯುತ್ತಿದೆ. ವಾಹನ ಸವಾರರು ಅದರಲ್ಲೂ ವಿಶೇಷವಾಗಿ ಕಾರು ಚಾಲಕರು ಪಡಬಾರದ ಪಡಿಪಾಟಲು ಪಡುತ್ತಿದ್ದಾರೆ. ಹರಿಯುವ ನೀರಿನ ರಭಸ ಜೋರಿಲ್ಲದ ಕಾರಣ ವಾಹನಗಳನ್ನು ಮುಂದಕ್ಕೆ ಓಡಿಸೋದು ಸಾಧ್ಯವಾಗುತ್ತಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಾರ್ಮಾಡಿ ಘಾಟ್ ನಲ್ಲಿ ಕೃತಕ ಜಲಪಾತ ಮತ್ತು ಇಬ್ಬನಿ ಸೃಷ್ಟಿಸಿರುವ ದೃಶ್ಯವೈಭವವನ್ನು ಒಬ್ಬ ಕವಿಯೇ ಚೆನ್ನಾಗಿ ಬಣ್ಣಿಸಬಲ್ಲ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More