AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಕತ್ತಿಗೆ ಜಾರಕಿಹೊಳಿ ಟಾಂಗ್

ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಕತ್ತಿಗೆ ಜಾರಕಿಹೊಳಿ ಟಾಂಗ್

Sahadev Mane
| Updated By: ರಮೇಶ್ ಬಿ. ಜವಳಗೇರಾ|

Updated on: Jul 20, 2025 | 12:21 PM

Share

ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಬೆಳಗಾವಿಯಲ್ಲಿ ಜೋರಾಯ್ತು ಕತ್ತಿ ಮತ್ತು ಜಾರಕಿಹೊಳಿ‌ ಕುಟುಂಬದ ನಡುವಿನ ಫೈಟ್ ಜೋರಾಗಿದೆ. ಇದರ ಬೆನ್ನಲ್ಲೇ ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದು, ನಿಡಸೋಶಿ ಮಠಕ್ಕೆ ‌ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸಮಯ ಬಂದಾಗ ನಾವು ಕುಸ್ತಿ ಆಡುತ್ತೇವೆ. ಕುಸ್ತಿ ಅಖಾಡ ಇನ್ನೂ ದೂರವಿದೆ ಎಂದರು.

ಬೆಳಗಾವಿ, ಜುಲೈ 20): ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಬೆಳಗಾವಿಯಲ್ಲಿ ಜೋರಾಯ್ತು ಕತ್ತಿ ಮತ್ತು ಜಾರಕಿಹೊಳಿ‌ ಕುಟುಂಬದ ನಡುವಿನ ಫೈಟ್ ಜೋರಾಗಿದೆ. ಇದರ ಬೆನ್ನಲ್ಲೇ ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದು, ನಿಡಸೋಶಿ ಮಠಕ್ಕೆ ‌ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸಮಯ ಬಂದಾಗ ನಾವು ಕುಸ್ತಿ ಆಡುತ್ತೇವೆ. ಕುಸ್ತಿ ಅಖಾಡ ಇನ್ನೂ ದೂರವಿದೆ. ನಮಗೆ ಅವಸರವಿಲ್ಲ. ಅವರಿಗೆ ಅರ್ಜೆಂಟ್​ ಇರಬಹುದು, ನಮಗೆ ಅರ್ಜೆಂಟ್ ಇಲ್ಲ. ಕಳೆದ 20 ವರ್ಷಗಳಿಂದ ನಮ್ಮ ವಿರುದ್ಧ ಸಭೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಪ್ರಾಕ್ಟಿಕಲ್ ಬೇರೆ ಥಿಯರಿ ಬೇರೆ‌. ಚಿತ್ರದುರ್ಗದಲ್ಲಿ ಐದು ಲಕ್ಷ ಜನರನ್ನು ನಾವು ಸೇರಿಸಿದ್ದೇವೆ. ಇಲ್ಲಿ 2 ಸಾವಿರ ಜನರನ್ನು ಸೇರಿಸಿದ್ದರೆ ಸಾಕು. ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ ಎಂದು ಕತ್ತಿ ಕುಟುಂಬಕ್ಕೆ ಟಾಂಗ್ ಕೊಟ್ಟರು.