AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ವಕ್ಫ್ ವಿರುದ್ಧ ಹೋರಾಟ ಆರಂಭಿಸಿದ್ದು ಯಾರು ಅನ್ನೋದು ಮುಖ್ಯವಲ್ಲ: ವಿಜಯೇಂದ್ರ

ರಾಜ್ಯದಲ್ಲಿ ವಕ್ಫ್ ವಿರುದ್ಧ ಹೋರಾಟ ಆರಂಭಿಸಿದ್ದು ಯಾರು ಅನ್ನೋದು ಮುಖ್ಯವಲ್ಲ: ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 21, 2024 | 5:33 PM

ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ವಿರುದ್ಧ ಅಂದೋಳನ ಶುರುಮಾಡಿದ್ದು ಬಸನಗೌಡ ಯತ್ನಾಳ್ ಅನ್ನೋದು ನಿರ್ವಿವಾದಿತ, ವಿರೋಧ ಪಕ್ಷದ ನಾಯಕ ಅರ್ ಅಶೋಕ ಅವರೇ ಯತ್ನಾಳ್ ಆರಂಭಿಸಿದ ಹೋರಾಟವನ್ನು ಹೈಜಾಕ್ ಮಾಡಲಾಗುತ್ತಿದೆ ಎಂದಿದ್ದಾರೆ. ಆದರೆ ವಿಜಯೇಂದ್ರ ಯತ್ನಾಳ್ ಗೆ ಕ್ರೆಡಿಟ್ ನೀಡಲು ತಯಾರಿಲ್ಲ.

ಹುಬ್ಬಳ್ಳಿ: ರೈತರ ಪರವಾಗಿ ವಕ್ಫ್ ಬೋರ್ಡ್ ವಿರುದ್ಧ ನಡೆಯುತ್ತಿರುವ ಹೋರಾಟ ಬಸನಗೌಡ ಪಾಟೀಲ್ ಯತ್ನಾಳ್ ಮೊದಲು ಶುರುಮಾಡಿದ್ದೋ ಅಥವಾ ವಿಜಯೇಂದ್ರನೋ ಅನ್ನೋದು ಮುಖ್ಯವಲ್ಲ, ಅಸಲಿಗೆ ಅದನ್ನು ಶುರುಮಾಡಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿಯವರು. ವಕ್ಫ್ ಹೆಸರಲ್ಲಿ ರೈತರಿಗೆ, ಮಠಮಾನ್ಯಗಳಿಗೆ ಮತ್ತ್ತು ಜನಸಾಮಾನ್ಯರಿಗೆ ಸಮಸ್ಯೆಯಾಗಬಾರದು ಅಂತ ಪ್ರಧಾನಿ ಮೋದಿಯವರು ಒಂದು ಸಂಸದೀಯ ಸಮಿತಿಯನ್ನು ರಚಿಸಿ ದೇಶದಾದ್ಯಂತ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಚಿಂತನೆ ಮಾಡುತ್ತಿದ್ದಾರೆ, ಅಸಲಿಗೆ ಇದು ಕೇಂದ್ರ ಸರ್ಕಾರದ ಯೋಜನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಲ್ಹಾದ್​ ಜೋಶಿರನ್ನು ಸೋಲಿಸಲು ಅಪ್ಪ-ಮಕ್ಕಳು ಪ್ರಯತ್ನಿಸಿದ್ರು: ಬಿಎಸ್​​ವೈ, ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿ

Published on: Nov 21, 2024 05:33 PM